ಶಿವಮೊಗ್ಗ: ಮಾಜಿ ಸಂಸದ, ದಿ.ಕೆ.ಜಿ.ಶಿವಪ್ಪ ಅವರ ಸಾಗರದ ಜೋಸೆಫ್ ನಗರದ ಮನೆಯ ಮೇಲೆ ಭಾನುವಾರ ಸಂಜೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಸುಮಾರು 25 ಅಧಿಕಾರಿಗಳ ತಂಡ ಎರಡು ತಾಸು ದಾಖಲೆಗಳ ಪರಿಶೀಲನೆ ನಡೆಸಿತು. ಶಿವಪ್ಪ ಅವರ ಪುತ್ರ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಕೆ.ಎಸ್.ಪ್ರಶಾಂತ್ ಈ ಮನೆಯಲ್ಲಿ ನೆಲೆಸಿದ್ದಾರೆ.