‘ಅಂದು ಮಧ್ಯಾಹ್ನ 2 ಗಂಟೆಗೆ ‘ಮಣ್ಣಿನ ಆರೋಗ್ಯ, ಕೃಷಿಯ ಸೌಭಾಗ್ಯ’ ಕುರಿತು ಕೃಷಿಗೋಷ್ಠಿ ಜರುಗಲಿದೆ. ಜ.5ರಂದು ಬೆಳಿಗ್ಗೆ 11 ಗಂಟೆಗೆ ‘ಸಿರಿಧಾನ್ಯ ಬಳಸಿ, ಆರೋಗ್ಯ ವೃದ್ಧಿಸಿ’, ಮಧ್ಯಾಹ್ನ 2 ಗಂಟೆಗೆ ‘ದ್ರಾಕ್ಷಿ, ದಾಳಿಂಬೆ ಮತ್ತು ನಿಂಬೆ ಬೆಳೆಗಳ ಸಸ್ಯ ಸಂರಕ್ಷಣೆ ತಂತ್ರಜ್ಞಾನಗಳು’ ಹಾಗೂ ಜ.6ರಂದು ಬೆಳಿಗ್ಗೆ 11 ಗಂಟೆಗೆ ‘ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಮಹತ್ವ’ ಕುರಿತು ಗೋಷ್ಠಿಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.