ಸರ್ಕಾರದ ಈ ತೀರ್ಮಾನದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ, ‘ಕೆಕೆಆರ್ಡಿಬಿಗೆ ಹಂಚಿಕೆಯಾದ ಅನುದಾನವನ್ನು ಹೊರತುಪಡಿಸಿ ಬೇರೆ ಅನುದಾನ ನೀಡಲಾಗುವುದು ಎಂದು ಸರ್ಕಾರವೇ ಭರವಸೆ ನೀಡಿತ್ತು. ಆದರೆ, ಇದೀಗ ಸದ್ದಿಲ್ಲದಂತೆ ಕೆಕೆಆರ್ಡಿಬಿ ಹಣವನ್ನು ಸಾಂಸ್ಕೃತಿಕ ಸಂಘಕ್ಕೆ ನೀಡುವ ಉದ್ದೇಶವೇನು? ಅಷ್ಟಕ್ಕೂ ಕಳೆದ ಒಂದು ವರ್ಷದಲ್ಲಿ ಸಂಘ ಮಾಡಿದ ಕೆಲಸ ಕಾರ್ಯಗಳೇನು’ ಎಂದು ಪ್ರಶ್ನಿಸಿದರು.