ದನ ಮೇಯಿಸುತ್ತಿದ್ದ ಚಂದ್ರಕಾಂತ ಚನ್ನಪ್ಪಗೋಳ ಕಬ್ಬಿಗೆ ಬೆಂಕಿ ಬಿದ್ದಿದ್ದನ್ನು ನೋಡಿದ್ದಾರೆ. ಬೆಂಕಿ ನಂದಿಸಲು ಹರಸಾಹ ಪಟ್ಟಿದ್ದು ಮೈ ಕೈಗೆ ಸುಟ್ಟ ಗಾಯಗಳಾಗಿವೆ. ನಂತರ ಹೊಲದ ಮಾಲೀಕ ಕಮಲಾಕರ ವಾರದ ಅವರಿಗೆ ತಿಳಿಸಿದ್ದಾರೆ. ನಾಲ್ಕೈದು ಜನ ಸೇರಿ ಬೆಂಕಿ ನಂದಿಸಲು ಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಕಬ್ಬು ಸುಟ್ಟಕರಕಲಾಗಿತ್ತು.