ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ‘ಜಾನಪದ ಕಲೆ ಹುಟ್ಟಿನಿಂದ ಚಟ್ಟದವರೆಗೆ ಜೀವಂತ ಇರುತ್ತದೆ. ಜಾನಪದ ಸಾಮಾನ್ಯ ಜನರ ಜೀವಾಳಾಗಿದೆ, ಕಲೆಗೆ ಸಾವಿಲ್ಲ. ಜಾನಪದ ಜನರಿಂದ ಜನರಿಗಾಗಿ ಹರಿದುಬಂದ ಮೌಖಿಕ ಕಲಾ ಸಂಸ್ಕೃತಿಯಾಗಿದೆ. ಶ್ರಮದ ಬದುಕಿಗೆ ಬೀಸಣಿಕೆ ಗಾಳಿಯಂತೆ ಆಸರೆಯಾಗಿ, ಹಾಸ್ಯ ಹುಟ್ಟಿಸುವುದರ ಮೂಲಕ ಜೀವನದಲ್ಲಿನ ನೋವನ್ನು ಮರೆಯಲು ಸಹಕಾರಿಯಾಗಿದೆ’ ಎಂದು ಹೇಳಿದರು.