ಮಾರ್ಚ್ 20ರಂದು ‘ಸಾಲ ತೀರಿಸಲು ಹೋಗಿದ್ದೆ, ಸಾಲ ಮಾಡಿ ಬಂದೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಷಣ್ಮುಗಂ ಅವರು ಪತ್ರಿಕೆಯ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ರಾಮು ಜಾಧವ ಕುಟುಂಬಕ್ಕೆ ಸಹಾಯ ಮಾಡುತ್ತೇನೆ, ಅವರ ವಿವರ ನೀಡಿ ಎಂದು ಕೋರಿದ್ದರು. ಕಲಬುರ್ಗಿ ಜಿಲ್ಲೆಯ ಕಮಲಾಪುರ ವರದಿಗಾರ ಆ ಕಾರ್ಮಿಕನ ಮನೆಗೆ ತೆರಳಿ ಕುಟುಂಬದ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ವಿವರವನ್ನು ಸಂಗ್ರಹಿಸಿ ಷಣ್ಮುಗಂ ಅವರಿಗೆ ತಲುಪಿಸಿದ್ದರು.