ತಾಲ್ಲೂಕಿನ ಶರಣ ಶಿರಸಗಿ ಗ್ರಾಮದ ಅಂಬೇಡ್ಕರ್ ನಗರ ನಿವಾಸಿ ಕನಿಷ್ಕ ಮಹಾದೇವಪ್ಪ ಧನ್ನಿ ಕಳೆದ ಡಿಸೆಂಬರ್ನಿಂದ ಆಯುಷ್ ಇಲಾಖೆಗೆ ಮಾಸಿಕ ₹ 28,050ರಂತೆ ಕಾರು ಒದಗಿಸುತ್ತಿದ್ದಾರೆ. ಇದನ್ನು ನಾಗರತ್ನ ಅವರು ಕಚೇರಿ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಜೂನ್ ಹಾಗೂ ಜುಲೈ ತಿಂಗಳ ಕಾರು ಬಾಡಿಗೆ ಬಿಲ್ಲನ್ನು ಪಡೆಯಲು ನಿಯಮದಂತೆ ಲಾಗ್ ಬುಕ್ ಬರೆದುಕೊಟ್ಟು ವಾಹನದ ಬಾಡಿಗೆ ಬಿಲ್ ನೀಡಿದ್ದರು.