ಘಟನೆ ವಿವರ: ‘ಆಳಂದ ತಾಲ್ಲೂಕಿನ ವೈಜಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯೊಬ್ಬರು 2019ರ ಅಕ್ಟೋಬರ್ನಲ್ಲಿ ರಜೆ ಪಡೆದುಕೊಂಡಿದ್ದರು. ಮತ್ತೆ ಕರ್ತವ್ಯಕ್ಕೆ ಮರಳುವ ಸಂಬಂಧ ಶಿಕ್ಷಕಿಯ ಪರವಾಗಿ ಅವರ ಪತಿ ರಾಜಕುಮಾರ ಕಾಂಬಳೆ, ಎಸ್ಡಿಎ ಶಶಿಕಾಂತ ಬಳಿ ವಿಚಾರಿಸಲು ತೆರಳಿದ್ದ ಸಂದರ್ಭದಲ್ಲಿ ₹ 5 ಸಾವಿರ ಹಣ ನೀಡಿದರೆ ಅನುಮತಿ ಸಿಗಲಿದೆ ಎಂದು ಸೂಚ್ಯವಾಗಿ ಹೇಳಿದ್ದರು. ಈ ಬಗ್ಗೆ ಕಾಂಬಳೆ ದೂರು ನೀಡಿದ್ದರು’ ಎಂದು ಎಸಿಬಿ ಮೂಲಗಳು ತಿಳಿಸಿವೆ.