ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯ ಮದನೂರ ತಾಲ್ಲೂಕಿನ ವಿಠಲವಾಡಿ ಗ್ರಾಮದ ಅರವಿಂದ ಲಕ್ಷ್ಮಣ ರಾಠೋಡ (8) ಲಾರಿಗೆ ಬಲಿಯಾದ ಯುವಕ. ಯಡ್ರಾಮಿ ತಾಲ್ಲೂಕಿನ ಮಾಗಣಗೇರಿಯಲ್ಲಿ ಸಿದ್ದಣ್ಣಗೌಡ ಎಂಬುವವರ ಹೊಲದಲ್ಲಿ ಕಬ್ಬು ಕಟಾವಿಗಾಗಿ ತಂದೆ ಲಕ್ಷ್ಮಣ ರಾಠೋಡ ಹಾಗೂ ಕುಟುಂಬದೊಂದಿಗೆ ಅರವಿಂದ ಬಂದಿದ್ದ. ಕಲಬುರ್ಗಿಯಿಂದ ಯಡ್ರಾಮಿಗೆ ತೆರಳುವ ಮಾರ್ಗದಲ್ಲಿ ಇವರು ಹೊರಟಿದ್ದ ವಾಹನ ಕೆಟ್ಟು ನಿಂತಿತು. ಹೀಗಾಗಿ, ಅದು ದುರಸ್ತಿಯಾಗುವ ತನಕ ಫರಹತಾಬಾದ್ ಗ್ರಾಮ ತಲುಪುವುದಕ್ಕೂ ಮುಂಚೆ ಇರುವ ಬಸ್ ನಿಲ್ದಾಣದ ಬಳಿ ಚಹಾ ಕುಡಿಯಲು ನಿಂತಾಗ ಘಟನೆ ನಡೆದಿದೆ.