ಕಬ್ಬು, ಕೆಂಪು ಮಣ್ಣು ಸೇರಿದಂತೆ ಸರಕು ಸಾಗಣೆಯ ವಾಹನಗಳು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಓಡಾಡುತ್ತಿವೆ. ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳಿವೆ. ವನ್ಯಜೀವಿ ಧಾಮದ ನಿಯಮಾನುಸಾರ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸಿಕೊಳ್ಳಬೇಕು ಎಂಬ ಷರತ್ತುಗಳಿದ್ದರೂ ಗುತ್ತಿಗೆದಾರ ಅದನ್ನು ಪೂರೈಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಈಗ ವಾಹನಗಳು ಉರುಳಿ ಬೀಳುತ್ತಿವೆ ಎಂದು ಸ್ಥಳೀಯ ಮುಖಂಡ ವಸಂತ ತಿಳಿಸಿದ್ದಾರೆ.