‘ಕಳೆದ ಬಾರಿ ಹೊರರಾಜ್ಯಗಳಿಂದಲೇ 224 ವಿದ್ಯಾರ್ಥಿಗಳು ಬಂದಿದ್ದರು. ಈಗ ತುಸು ಹಿಂಜರಿಕೆ ಪಡುತ್ತಿದ್ದಾರೆ. ಹೀಗಾಗಿ, ವಿಶ್ವವಿದ್ಯಾಲಯದ ಎಲ್ಲ ತಜ್ಞರೂ ಸಭೆ ಸೇರಿ ಚರ್ಚಿಸಿದ್ದೇವೆ. ಶೈಕ್ಷಣಿಕ ಅರ್ಹತೆಯನ್ನು ಸಡಿಲಗೊಳಿಸಿದ್ದೇವೆ. ಈ ಮೊದಲು 40 ಮಂದಿ ಇರುತ್ತಿದ್ದ ಕೊಠಡಿಯಲ್ಲಿ ಈಗ 22 ಮಂದಿ ಮಾತ್ರ ಇರುತ್ತಾರೆ. ಹಾಸ್ಟೆಲ್ಗಳಲ್ಲೂ ಸುರಕ್ಷಿತ ಅಂತರಕ್ಕೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಯುಜಿಸಿ ನೀಡುವ ಮರ್ಗದರ್ಶನದ ಪ್ರಕಾರವೇ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದರು.