<p><strong>ಅಫಜಲಪುರ:</strong> ಬಡವರಿಗೆ ಅನುಕೂಲವಾಗಲಿ ಎಂದು ಪಟ್ಟಣದಿಂದ ಒಂದು ಕಿ.ಮೀ ಅಂತರದಲ್ಲಿ ಪುರಸಭೆ ನಿವೇಶನ ಗುರುತಿಸಿ, ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿದೆ. ಆದರೆ, ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಮೂಲಸೌಕರ್ಯ ಮರೀಚಿಕೆಯಾಗಿದೆ.</p>.<p>ದೇಸಾಯಿ ಕಲ್ಲೂರು ಗ್ರಾಮದ ರಸ್ತೆ ಪಕ್ಕದಲ್ಲಿ ಆಶ್ರಯ ಕಾಲೊನಿ ಇದೆ. 1991-92ನೇ ಸಾಲಿನಲ್ಲಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರು ಈ ಕಾಲೊನಿಗೆ 100 ಮನೆಗಳನ್ನು ನೀಡಿದ್ದರು. ಆಶ್ರಯ ಕಾಲೊನಿಗೆ ತೆರಳುವ ರಸ್ತೆ ತುಂಬಾ ಹಾಳಾಗಿ ಹೋಗಿದೆ. ರಸ್ತೆಯ ಎರಡೂ ಬದಿಯಲ್ಲಿ ಗಿಡ–ಗಂಟಿಗಳು ಬೆಳೆದು ನಿಂತಿವೆ. ಆಶ್ರಯ ಕಾಲೊನಿಯ ಜನ ಪ್ರತಿದಿನ ಜನರು ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಅವರಿಗೆ ಸರಿಯಾದ ರಸ್ತೆ ಮತ್ತು ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ.</p>.<p>ಇಲ್ಲಿನ ಪುರಸಭೆಗೆ ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಅನುದಾನ ಹರಿದು ಬಂದರೂ ನಿರೀಕ್ಷಿತ ಮಟ್ಟದಲ್ಲಿ ಪಟ್ಟಣ ಅಭಿವೃದ್ಧಿಯಾಗಿಲ್ಲ.</p>.<p>ಆಶ್ರಯ ಕಾಲೊನಿ ಸಮಸ್ಯೆ ಕುರಿತು ಆ ಭಾಗದ ಪುರಸಭೆ ಮಾಜಿ ಸದಸ್ಯ ಶಿವಾನಂದ ಸಲಗರ ಮಾಹಿತಿ ನೀಡಿ,‘ಆಶ್ರಯ ಕಾಲೊನಿ ವಾರ್ಡ್ ಸಂಖ್ಯೆ–21ರ ವ್ಯಾಪ್ತಿಗೆ ಬರುತ್ತದೆ. ಕಾಲೊನಿ ಒಳಗೆ ಹೋಗಲು ರಸ್ತೆ ಇಲ್ಲ. ಗುತ್ತಿಗೆದಾರರೊಬ್ಬರು ಕೆಕೆಆರ್ಡಿಬಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮಾಡಿದ್ದಾರೆ. ಮಾಡಿರುವ ರಸ್ತೆಯೂ ಕಳಪೆ ಆಗಿದ್ದರಿಂದ ಅದೂ ಹಾಳಾಗಿ ಹೋಗಿದೆ. ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ’ ಎಂದು ಹೇಳಿದರು.</p>.<p>‘ಕಾಲೊನಿಗೆ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಿ 2 ವರ್ಷ ಕಳೆದರೂ ಇನ್ನೂ ಅದು ಬಳಕೆಗೆ ಲಭ್ಯವಾಗಿಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ನೀರು ಪೂರೈಕೆ ಮಾಡಲು ಕೊಳವೆ ಬಾವಿ ಕೊರೆಯಲಾಗಿದೆ. ಆದರೆ, ಅದಕ್ಕೆ ಅಳವಡಿಸಿರುವ ವಿದ್ಯುತ್ ಪಂಪ್ಸೆಟ್ ಕಳವಾಗಿದೆ. ಈ ಹಿಂದಿನ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಆಶ್ರಯ ಕಾಲೊನಿ ನಿವಾಸಿ ಸಂತೋಷ ಮಡ್ಡಿಕರ್ ಮಾಹಿತಿ ನೀಡಿ,‘ಆಶ್ರಯ ಕಾಲೊನಿಯಲ್ಲಿ 1ರಿಂದ 5ನೇ ತರಗತಿವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಮಕ್ಕಳು ಶಾಲೆಗೆ ತೆರಳಲು ಸರಿಯಾದ ರಸ್ತೆ ಇಲ್ಲ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮಕ್ಕಳು ಒಂದು ಕಿಲೋ ಮೀಟರ್ ನಡೆದುಕೊಂಡು ಪಟ್ಟಣದ ಶಾಲೆಗಳಿಗೆ ಹೋಗಬೇಕಾಗಿದೆ. ಸಣ್ಣ ಮಕ್ಕಳು ಸಂಚರಿಸಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಕಾಲೊನಿಗೆ ಹಿರಿಯ ಪ್ರಾಥಮಿಕ ಶಾಲೆ ಮಂಜೂರು ಮಾಡಬೇಕು. ಕಾಲೊನಿಯಿಂದ ಪಟ್ಟಣದವರೆಗೆ ವಿದ್ಯುತ್ ದೀಪದ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.</p>.<p>ಈಚೆಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಫಕ್ರುದ್ದೀನ್ ಅವರು ಅಧಿಕಾರ ವಹಿಸಿಕೊಂಡಿದ್ದು, ವಾರದಲ್ಲಿ ಮೂರು ದಿನ ಶಹಾಬಾದ್ ನಗರಸಭೆಗೆ ಹೋಗಿ ಬರುತ್ತಾರೆ. ಇನ್ನುಳಿದ ಮೂರು ದಿನ ಅಫಜಲಪುರದಲ್ಲಿ ಕೆಲಸ ಮಾಡುತ್ತಾರೆ. ಭಾನುವಾರ, ಸರ್ಕಾರಿ ರಜೆಗಳು ಮತ್ತು ಕಲಬುರಗಿಯಲ್ಲಿ ಸಭೆಗಳನ್ನು ನಿರ್ವಹಣೆ ಮಾಡುತ್ತಿರುವುದರಿಂದ ಪುರಸಭೆ ಕೆಲಸ, ಕಾರ್ಯಗಳು ಆಗದಿರುವುದರಿಂದ ಜನರು ಕಷ್ಟ ಪಡುವಂತಾಗಿದೆ. ಸರ್ಕಾರ ಕಾಯಂ ಮುಖ್ಯಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಪಟ್ಟಣದ ನಾಗರಿಕರು ಒತ್ತಾಯಿಸುತ್ತಾರೆ.</p>.<div><blockquote>ಆಶ್ರಯ ಕಾಲೊನಿಯಲ್ಲಿ ಶೌಚಾಲಯಕ್ಕೆ ನೀರು ಪೂರೈಕೆಯಾಗುವ ಕೊಳವೆಬಾವಿಯ ಪಂಪ್ಸೆಟ್ ಕಳವಾಗಿದೆ. ವಿಚಾರಿಸಿ ಕ್ರಮ ಜರುಗಿಸಲಾಗುವುದು. ಆದಷ್ಟು ಬೇಗ ಶೌಚಾಲಯ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು </blockquote><span class="attribution">ಫಕ್ರುದ್ದೀನ್, ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ:</strong> ಬಡವರಿಗೆ ಅನುಕೂಲವಾಗಲಿ ಎಂದು ಪಟ್ಟಣದಿಂದ ಒಂದು ಕಿ.ಮೀ ಅಂತರದಲ್ಲಿ ಪುರಸಭೆ ನಿವೇಶನ ಗುರುತಿಸಿ, ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿದೆ. ಆದರೆ, ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಮೂಲಸೌಕರ್ಯ ಮರೀಚಿಕೆಯಾಗಿದೆ.</p>.<p>ದೇಸಾಯಿ ಕಲ್ಲೂರು ಗ್ರಾಮದ ರಸ್ತೆ ಪಕ್ಕದಲ್ಲಿ ಆಶ್ರಯ ಕಾಲೊನಿ ಇದೆ. 1991-92ನೇ ಸಾಲಿನಲ್ಲಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರು ಈ ಕಾಲೊನಿಗೆ 100 ಮನೆಗಳನ್ನು ನೀಡಿದ್ದರು. ಆಶ್ರಯ ಕಾಲೊನಿಗೆ ತೆರಳುವ ರಸ್ತೆ ತುಂಬಾ ಹಾಳಾಗಿ ಹೋಗಿದೆ. ರಸ್ತೆಯ ಎರಡೂ ಬದಿಯಲ್ಲಿ ಗಿಡ–ಗಂಟಿಗಳು ಬೆಳೆದು ನಿಂತಿವೆ. ಆಶ್ರಯ ಕಾಲೊನಿಯ ಜನ ಪ್ರತಿದಿನ ಜನರು ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಅವರಿಗೆ ಸರಿಯಾದ ರಸ್ತೆ ಮತ್ತು ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ.</p>.<p>ಇಲ್ಲಿನ ಪುರಸಭೆಗೆ ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಅನುದಾನ ಹರಿದು ಬಂದರೂ ನಿರೀಕ್ಷಿತ ಮಟ್ಟದಲ್ಲಿ ಪಟ್ಟಣ ಅಭಿವೃದ್ಧಿಯಾಗಿಲ್ಲ.</p>.<p>ಆಶ್ರಯ ಕಾಲೊನಿ ಸಮಸ್ಯೆ ಕುರಿತು ಆ ಭಾಗದ ಪುರಸಭೆ ಮಾಜಿ ಸದಸ್ಯ ಶಿವಾನಂದ ಸಲಗರ ಮಾಹಿತಿ ನೀಡಿ,‘ಆಶ್ರಯ ಕಾಲೊನಿ ವಾರ್ಡ್ ಸಂಖ್ಯೆ–21ರ ವ್ಯಾಪ್ತಿಗೆ ಬರುತ್ತದೆ. ಕಾಲೊನಿ ಒಳಗೆ ಹೋಗಲು ರಸ್ತೆ ಇಲ್ಲ. ಗುತ್ತಿಗೆದಾರರೊಬ್ಬರು ಕೆಕೆಆರ್ಡಿಬಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮಾಡಿದ್ದಾರೆ. ಮಾಡಿರುವ ರಸ್ತೆಯೂ ಕಳಪೆ ಆಗಿದ್ದರಿಂದ ಅದೂ ಹಾಳಾಗಿ ಹೋಗಿದೆ. ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ’ ಎಂದು ಹೇಳಿದರು.</p>.<p>‘ಕಾಲೊನಿಗೆ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಿ 2 ವರ್ಷ ಕಳೆದರೂ ಇನ್ನೂ ಅದು ಬಳಕೆಗೆ ಲಭ್ಯವಾಗಿಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ನೀರು ಪೂರೈಕೆ ಮಾಡಲು ಕೊಳವೆ ಬಾವಿ ಕೊರೆಯಲಾಗಿದೆ. ಆದರೆ, ಅದಕ್ಕೆ ಅಳವಡಿಸಿರುವ ವಿದ್ಯುತ್ ಪಂಪ್ಸೆಟ್ ಕಳವಾಗಿದೆ. ಈ ಹಿಂದಿನ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಆಶ್ರಯ ಕಾಲೊನಿ ನಿವಾಸಿ ಸಂತೋಷ ಮಡ್ಡಿಕರ್ ಮಾಹಿತಿ ನೀಡಿ,‘ಆಶ್ರಯ ಕಾಲೊನಿಯಲ್ಲಿ 1ರಿಂದ 5ನೇ ತರಗತಿವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಮಕ್ಕಳು ಶಾಲೆಗೆ ತೆರಳಲು ಸರಿಯಾದ ರಸ್ತೆ ಇಲ್ಲ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮಕ್ಕಳು ಒಂದು ಕಿಲೋ ಮೀಟರ್ ನಡೆದುಕೊಂಡು ಪಟ್ಟಣದ ಶಾಲೆಗಳಿಗೆ ಹೋಗಬೇಕಾಗಿದೆ. ಸಣ್ಣ ಮಕ್ಕಳು ಸಂಚರಿಸಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಕಾಲೊನಿಗೆ ಹಿರಿಯ ಪ್ರಾಥಮಿಕ ಶಾಲೆ ಮಂಜೂರು ಮಾಡಬೇಕು. ಕಾಲೊನಿಯಿಂದ ಪಟ್ಟಣದವರೆಗೆ ವಿದ್ಯುತ್ ದೀಪದ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.</p>.<p>ಈಚೆಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಫಕ್ರುದ್ದೀನ್ ಅವರು ಅಧಿಕಾರ ವಹಿಸಿಕೊಂಡಿದ್ದು, ವಾರದಲ್ಲಿ ಮೂರು ದಿನ ಶಹಾಬಾದ್ ನಗರಸಭೆಗೆ ಹೋಗಿ ಬರುತ್ತಾರೆ. ಇನ್ನುಳಿದ ಮೂರು ದಿನ ಅಫಜಲಪುರದಲ್ಲಿ ಕೆಲಸ ಮಾಡುತ್ತಾರೆ. ಭಾನುವಾರ, ಸರ್ಕಾರಿ ರಜೆಗಳು ಮತ್ತು ಕಲಬುರಗಿಯಲ್ಲಿ ಸಭೆಗಳನ್ನು ನಿರ್ವಹಣೆ ಮಾಡುತ್ತಿರುವುದರಿಂದ ಪುರಸಭೆ ಕೆಲಸ, ಕಾರ್ಯಗಳು ಆಗದಿರುವುದರಿಂದ ಜನರು ಕಷ್ಟ ಪಡುವಂತಾಗಿದೆ. ಸರ್ಕಾರ ಕಾಯಂ ಮುಖ್ಯಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಪಟ್ಟಣದ ನಾಗರಿಕರು ಒತ್ತಾಯಿಸುತ್ತಾರೆ.</p>.<div><blockquote>ಆಶ್ರಯ ಕಾಲೊನಿಯಲ್ಲಿ ಶೌಚಾಲಯಕ್ಕೆ ನೀರು ಪೂರೈಕೆಯಾಗುವ ಕೊಳವೆಬಾವಿಯ ಪಂಪ್ಸೆಟ್ ಕಳವಾಗಿದೆ. ವಿಚಾರಿಸಿ ಕ್ರಮ ಜರುಗಿಸಲಾಗುವುದು. ಆದಷ್ಟು ಬೇಗ ಶೌಚಾಲಯ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು </blockquote><span class="attribution">ಫಕ್ರುದ್ದೀನ್, ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>