<p>ಅಫಜಲಪುರ: ‘ಪ್ರತಿಯೊಬ್ಬರೂ ಸತ್ಯ ಶುದ್ಧವಾದ ಕಾಯಕ ಮಾಡುವುದು ಮತ್ತು ಅದರ ಪ್ರತಿಫಲವನ್ನು ಸಮಾಜದೊಂದಿಗೆ ದಾಸೋಹದ ರೂಪದಲ್ಲಿ ವಿನಿಯೋಗ ಮಾಡಿಕೊಂಡರೆ, ಆರ್ಥಿಕ ಸಮಾನತೆ ಉಂಟಾಗುತ್ತದೆ. ಕಾಯಕ ಮತ್ತು ದಾಸೋಹ ಆರ್ಥಿಕತೆಯ ಎರಡು ಸ್ತಂಭಗಳಾಗಿವೆ’ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಸೇಡಂ ಎಚ್ ಹೇಳಿದರು.</p>.<p>ತಾಲ್ಲೂಕಿನ ಗೊಬ್ಬುರವಾಡಿ ತಾಂಡಾದ ಸಂತ ಸೇವಾಲಾಲ ಮಹಾರಾಜ ಆಶ್ರಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಅಂಗವಾಗಿ ಜರುಗುತ್ತಿರುವ ಸರಣಿ ಉಪನ್ಯಾಸ ಮಾಲಿಕೆ-8ರಲ್ಲಿ ‘ಬಸವಣ್ಣನವರ ಆರ್ಥಿಕ ಚಿಂತನೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.</p>.<p>‘ಬಸವಣ್ಣನವರ ಆರ್ಥಿಕ ಚಿಂತನೆಗಳು ಕೇವಲ ಸಿದ್ಧಾಂತವಾಗಿರದೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಆಧಾರಿತವಾದ ಪ್ರಾಯೋಗಿಕ ಜೀವನ ವಿಧಾನಗಳಾಗಿವೆ. ಕಾಯಕವೇ ಕೈಲಾಸ, ದಾಸೋಹ ತತ್ವ, ಆರ್ಥಿಕ ಸಮಾನತೆಯ ತತ್ವ ಆರ್ಥಿಕ ಸಮಾನತೆಗೂ ಮಾರ್ಗದರ್ಶಿಯಾಗಿದೆ’ ಎಂದರು.</p>.<p>ಆಶ್ರಮದ ಪೀಠಾಧಿಪತಿ ಬಳಿರಾಮ ಮಹಾರಾಜ, ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಹರಿಶ್ಚಂದ್ರ ಪವಾರ, ಜಗನಾಥ ರಾಠೋಡ, ರಾಮಚಂದ್ರ ಜಾಧವ, ಜೈರಾಮ ಜಾಧವ,ಮಂಜುನಾಥ ಪವಾರ, ಸುಧೀರ ಜಾಧವ, ದತ್ತು ರಾಠೋಡ, ಗೀತಾ ರಾಠೋಡ ಇತರರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-31-58195173</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಫಜಲಪುರ: ‘ಪ್ರತಿಯೊಬ್ಬರೂ ಸತ್ಯ ಶುದ್ಧವಾದ ಕಾಯಕ ಮಾಡುವುದು ಮತ್ತು ಅದರ ಪ್ರತಿಫಲವನ್ನು ಸಮಾಜದೊಂದಿಗೆ ದಾಸೋಹದ ರೂಪದಲ್ಲಿ ವಿನಿಯೋಗ ಮಾಡಿಕೊಂಡರೆ, ಆರ್ಥಿಕ ಸಮಾನತೆ ಉಂಟಾಗುತ್ತದೆ. ಕಾಯಕ ಮತ್ತು ದಾಸೋಹ ಆರ್ಥಿಕತೆಯ ಎರಡು ಸ್ತಂಭಗಳಾಗಿವೆ’ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಸೇಡಂ ಎಚ್ ಹೇಳಿದರು.</p>.<p>ತಾಲ್ಲೂಕಿನ ಗೊಬ್ಬುರವಾಡಿ ತಾಂಡಾದ ಸಂತ ಸೇವಾಲಾಲ ಮಹಾರಾಜ ಆಶ್ರಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಅಂಗವಾಗಿ ಜರುಗುತ್ತಿರುವ ಸರಣಿ ಉಪನ್ಯಾಸ ಮಾಲಿಕೆ-8ರಲ್ಲಿ ‘ಬಸವಣ್ಣನವರ ಆರ್ಥಿಕ ಚಿಂತನೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.</p>.<p>‘ಬಸವಣ್ಣನವರ ಆರ್ಥಿಕ ಚಿಂತನೆಗಳು ಕೇವಲ ಸಿದ್ಧಾಂತವಾಗಿರದೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಆಧಾರಿತವಾದ ಪ್ರಾಯೋಗಿಕ ಜೀವನ ವಿಧಾನಗಳಾಗಿವೆ. ಕಾಯಕವೇ ಕೈಲಾಸ, ದಾಸೋಹ ತತ್ವ, ಆರ್ಥಿಕ ಸಮಾನತೆಯ ತತ್ವ ಆರ್ಥಿಕ ಸಮಾನತೆಗೂ ಮಾರ್ಗದರ್ಶಿಯಾಗಿದೆ’ ಎಂದರು.</p>.<p>ಆಶ್ರಮದ ಪೀಠಾಧಿಪತಿ ಬಳಿರಾಮ ಮಹಾರಾಜ, ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಹರಿಶ್ಚಂದ್ರ ಪವಾರ, ಜಗನಾಥ ರಾಠೋಡ, ರಾಮಚಂದ್ರ ಜಾಧವ, ಜೈರಾಮ ಜಾಧವ,ಮಂಜುನಾಥ ಪವಾರ, ಸುಧೀರ ಜಾಧವ, ದತ್ತು ರಾಠೋಡ, ಗೀತಾ ರಾಠೋಡ ಇತರರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-31-58195173</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>