ಅಲ್ಲದೇ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಕೆ.ಅರ್ಜುನ ಪರಿಶಿಷ್ಟ ಜಾತಿಯ ಯುವಕ ಕೆ.ಎಲ್. ಪುನೀತ ಎಂಬುವರನ್ನು ಠಾಣೆಗೆ ಕರೆಸಿ ಮೂತ್ರ ಕುಡಿಸಿರುವುದು ಅತ್ಯಂತ ಖಂಡನೀಯ. ಯುವಕನನ್ನು ಅಕ್ರಮವಾಗಿ ಬಂಧಿಸಿದ್ದಲ್ಲದೇ ಮನಸೋ ಇಚ್ಛೆ ಥಳಿಸಿರುವುದನ್ನು ನೋಡಿದರೆ ನಾವು ಯಾವ ಸಮಾಜದಲ್ಲಿ ಇದ್ದೇವೆ ಎಂಬ ಆತಂಕ ಮೂಡುತ್ತದೆ. ತಕ್ಷಣ ಪಿಎಸ್ಐರನ್ನು ಅಮಾನತಿನಲ್ಲಿರಿಸಬೇಕು. ಬಂಧಿಸಿ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ದಲಿತ ಸಂಘಟನೆಗಳು ಬೀದಿಗಿಳಿಯುತ್ತವೆ ಎಂದು ಅಷ್ಠಗಿ ಎಚ್ಚರಿಸಿದ್ದಾರೆ.