<p>ಆಳಂದ: ‘ಪ್ರಸ್ತುತ ಒತ್ತಡದ ಬದುಕಿನಿಂದ ಪ್ರತಿಯೊಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಇದಕ್ಕೆ ಸಂಗೀತ, ಸಾಹಿತ್ಯಾಭಿರುಚಿ ಬೆಳೆಸುವ ಕಲೆಗಳಿಂದ ಮಾತ್ರ ನೆಮ್ಮದಿ ಸಿಗಲಿದೆ’ ಎಂದು ಆಳಂದ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ತಿಳಿಸಿದರು.</p>.<p>ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಆಳಂದದಿಂದ ಏರ್ಪಡಿಸಿದ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ಜನಪದವು ಕಲೆ ಮಾತ್ರವಾಗಿಲ್ಲ, ಅದು ನಮ್ಮ ಸಂಸ್ಕೃತಿಯಾಗಿದ್ದು, ಪರಂಪರಾಗತವಾದ ಹಬ್ಬ, ಆಚರಣೆ, ಕೃಷಿ, ಕಾಯಕ, ಕತೆ, ಕಾವ್ಯ, ಸಂಗೀತ ಕಲೆಗಳ ಮೂಲವಾಗಿರುವ ಜನಪದವು ಮೌಲ್ಯಯುತವಾಗಿದೆ’ ಎಂದು ಹೇಳಿದರು.</p>.<p>ಬಾಬುರಾವ ಮಡ್ಡೆ, ಶಿವಲಿಂಗ ತೇಲ್ಕರ್ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಎಸ್ ಮಾತನಾಡಿದರು. ಜ್ಯೋತಿ ಎಸ್ ಮಡ್ಡೆ ಅಧ್ಯಕ್ಷತೆವಹಿಸಿದರು. ನಿರಾಕಾರ ಸ್ವಾಮೀಜಿ, ಶಿವಶರಣಯ್ಯ ಸ್ವಾಮಿ ಖಂಡಾಳ, ಪ್ರಕಾಶ ಜಂಗಲೆ, ಪ್ರಭು ಪಾಟೀಲ, ಸಿದ್ದರಾಮ ಕೊಚಡೆ, ಸುರೇಶ ಮಡ್ಡೆ ಉಪಸ್ಥಿತರಿದ್ದರು.</p>.<p>ಕಲಾವಿದರಾದ ಬಸಯ್ಯ ಗುತ್ತೇದಾರ, ಶ್ರೀಶೈಲ ಕೊಂಡದ, ಸೈದಪ್ಪ ಸಪ್ಪನಗೋಳ, ಮಲ್ಲಿಕಾರ್ಜುನ ದೊಡ್ಡಿ, ಬಸವರಾಜ ಆಳಂದ, ವಿಜಯಕುಮಾರ ಅವರು ಜನಪದ ಹಾಡು, ತತ್ವಪದ ಗಾಯನ, ಸುಗಮ ಸಂಗೀತ ಹಾಗೂ ಭಕ್ತಿಗೀತೆಗಳ ಹಾಡುವ ಮೂಲಕ ರಂಜಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-31-1036287561</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಳಂದ: ‘ಪ್ರಸ್ತುತ ಒತ್ತಡದ ಬದುಕಿನಿಂದ ಪ್ರತಿಯೊಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಇದಕ್ಕೆ ಸಂಗೀತ, ಸಾಹಿತ್ಯಾಭಿರುಚಿ ಬೆಳೆಸುವ ಕಲೆಗಳಿಂದ ಮಾತ್ರ ನೆಮ್ಮದಿ ಸಿಗಲಿದೆ’ ಎಂದು ಆಳಂದ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ತಿಳಿಸಿದರು.</p>.<p>ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಆಳಂದದಿಂದ ಏರ್ಪಡಿಸಿದ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ಜನಪದವು ಕಲೆ ಮಾತ್ರವಾಗಿಲ್ಲ, ಅದು ನಮ್ಮ ಸಂಸ್ಕೃತಿಯಾಗಿದ್ದು, ಪರಂಪರಾಗತವಾದ ಹಬ್ಬ, ಆಚರಣೆ, ಕೃಷಿ, ಕಾಯಕ, ಕತೆ, ಕಾವ್ಯ, ಸಂಗೀತ ಕಲೆಗಳ ಮೂಲವಾಗಿರುವ ಜನಪದವು ಮೌಲ್ಯಯುತವಾಗಿದೆ’ ಎಂದು ಹೇಳಿದರು.</p>.<p>ಬಾಬುರಾವ ಮಡ್ಡೆ, ಶಿವಲಿಂಗ ತೇಲ್ಕರ್ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಎಸ್ ಮಾತನಾಡಿದರು. ಜ್ಯೋತಿ ಎಸ್ ಮಡ್ಡೆ ಅಧ್ಯಕ್ಷತೆವಹಿಸಿದರು. ನಿರಾಕಾರ ಸ್ವಾಮೀಜಿ, ಶಿವಶರಣಯ್ಯ ಸ್ವಾಮಿ ಖಂಡಾಳ, ಪ್ರಕಾಶ ಜಂಗಲೆ, ಪ್ರಭು ಪಾಟೀಲ, ಸಿದ್ದರಾಮ ಕೊಚಡೆ, ಸುರೇಶ ಮಡ್ಡೆ ಉಪಸ್ಥಿತರಿದ್ದರು.</p>.<p>ಕಲಾವಿದರಾದ ಬಸಯ್ಯ ಗುತ್ತೇದಾರ, ಶ್ರೀಶೈಲ ಕೊಂಡದ, ಸೈದಪ್ಪ ಸಪ್ಪನಗೋಳ, ಮಲ್ಲಿಕಾರ್ಜುನ ದೊಡ್ಡಿ, ಬಸವರಾಜ ಆಳಂದ, ವಿಜಯಕುಮಾರ ಅವರು ಜನಪದ ಹಾಡು, ತತ್ವಪದ ಗಾಯನ, ಸುಗಮ ಸಂಗೀತ ಹಾಗೂ ಭಕ್ತಿಗೀತೆಗಳ ಹಾಡುವ ಮೂಲಕ ರಂಜಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-31-1036287561</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>