<p>ಕಲಬುರಗಿ: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಕಲಾ ಗ್ಯಾಲರಿಯಲ್ಲಿ ಚಿತ್ರಕಲಾವಿದ ಚಂದ್ರಶೇಖರ ಜಿ.ಪಾಟೀಲ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಸೋಮವಾರ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಚಾಲನೆ ನೀಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಮಾತನಾಡಿದ ಅವರು, ಅಮೂರ್ತ ಚಿತ್ರಗಳು ಸಂಗೀತಗಾರನ ಅಲಾಪನೆಯ ಹಾಗೆ ಆಸ್ವಾದಕನಿಗೆ ಸಂತೋಷವನ್ನು ನೀಡುತ್ತವೆ. ದೃಶ್ಯಕಲೆಯಲ್ಲಿ ಅಮೂರ್ತ ಶೈಲಿಯು ಯೂರೋಪ್ನ ಸಮಕಾಲೀನ ಕಲಾ ಚಳವಳಿಯಲ್ಲಿ ತೇಲಿಬಂದ ಶೈಲಿಯಾಗಿದ್ದು, ಇವತ್ತು ಜಗತ್ತಿನ ಎಲ್ಲೆಡೆ ಹಲವು ಕಲಾವಿದರು ಈ ಶೈಲಿಯಲ್ಲಿ ಚಿತ್ರಿಸುತ್ತಿದ್ದಾರೆ. ನವರಸಗಳಲ್ಲಿ ಕೊನೆಯದಾದ ಶಾಂತರಸಕ್ಕೆ ಸಮನಾಗಿ ಅಮೂರ್ತ ಚಿತ್ರಗಳನ್ನು ಗಣಿಸಬಹುದು. ಅಲ್ಲಿ ಪ್ರಾಪಂಚಿಕ ವಿರಕ್ತಿ ಅಥವಾ ಅಲೌಕಿಕ ಅನುಭ ಆಸ್ವಾಧ್ಯವಾಗುವಂತೆ ಚಿತ್ರಕಲೆಯಲ್ಲೂ ಸಾಧ್ಯ ಎಂದರು.</p>.<p>ಮುಖ್ಯ ಅತಿಥಿಯಾಗಿದ್ದ ಚಿತ್ರಕಲಾವಿದ ವಿ.ಬಿ. ಬಿರಾದಾರ, ‘ಅಮೂರ್ತ ಚಿತ್ರಕಲೆ ಆಂತರಿಕ ಸೌಂದರ್ಯಾನುಭವ ನೀಡುತ್ತವೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ.ಎಚ್.ವಿ. ಮಂತೆಟ್ಟಿ ಮಾತನಾಡಿ, ‘ಮೂರ್ತ ಅಮೂರ್ತಗಳ ನಡುವೆ ಸಾಕಷ್ಟು ಅಂತರವಿದೆ. ನೋಡಲು ಸರಳವಾಗಿ ಕಂಡರೂ ಅಮೂರ್ತ ಕಲಾಕೃತಿಗಳನ್ನು ನೋಡಲು ಸರಳವಾಗಿ ಕಂಡರೂ ಅಮೂರ್ತ ಕಲಾಕೃತಿಗಳ ರಚನೆ ಸುಲಭವಲ್ಲ’ ಎಂದರು.</p>.<p>ಅಶೋಕ ಚಿತ್ತಕೋಟಿ ನಿರೂಪಿಸಿದರು. ಚಂದ್ರಶೇಖರ ಜಿ. ಪಾಟೀಲ ವಂದಿಸಿದರು. ಡಾ. ವಿ.ಜಿ. ಅಂದಾನಿ, ಲೋಕಯ್ಯಾ ಮಠಪತಿ, ರಾಜಶೇಖರ ಎಸ್, ಚಂದ್ರಹಾಸ ಜಾಲಿಹಾಳ, ಗೌತಮ ಅಂದಾನಿ, ಚಿತ್ರಶೇಖರ ಮರಪಳ್ಳಿ, ಗೌರೀಶ ಅಂದಾನಿ, ಮಹ್ಮದ ಅಯಾಜುದ್ದೀನ್ ಪಟೇಲ್, ಡಾ ರೆಹಮಾನ ಪಟೇಲ್, ಏಹೇಸಾನ್, ಡಾ ಶಾಹೀದ್ ಪಾಶಾ, ಶ್ರೀಶೈಲ್ ಗುಡೇದ, ನಾರಾಯಣ ಎಂ. ಜೋಶಿ ಇದ್ದರು.</p>.<p>ಡಿ 29ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವೀಕ್ಷಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಕಲಾ ಗ್ಯಾಲರಿಯಲ್ಲಿ ಚಿತ್ರಕಲಾವಿದ ಚಂದ್ರಶೇಖರ ಜಿ.ಪಾಟೀಲ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಸೋಮವಾರ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಚಾಲನೆ ನೀಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಮಾತನಾಡಿದ ಅವರು, ಅಮೂರ್ತ ಚಿತ್ರಗಳು ಸಂಗೀತಗಾರನ ಅಲಾಪನೆಯ ಹಾಗೆ ಆಸ್ವಾದಕನಿಗೆ ಸಂತೋಷವನ್ನು ನೀಡುತ್ತವೆ. ದೃಶ್ಯಕಲೆಯಲ್ಲಿ ಅಮೂರ್ತ ಶೈಲಿಯು ಯೂರೋಪ್ನ ಸಮಕಾಲೀನ ಕಲಾ ಚಳವಳಿಯಲ್ಲಿ ತೇಲಿಬಂದ ಶೈಲಿಯಾಗಿದ್ದು, ಇವತ್ತು ಜಗತ್ತಿನ ಎಲ್ಲೆಡೆ ಹಲವು ಕಲಾವಿದರು ಈ ಶೈಲಿಯಲ್ಲಿ ಚಿತ್ರಿಸುತ್ತಿದ್ದಾರೆ. ನವರಸಗಳಲ್ಲಿ ಕೊನೆಯದಾದ ಶಾಂತರಸಕ್ಕೆ ಸಮನಾಗಿ ಅಮೂರ್ತ ಚಿತ್ರಗಳನ್ನು ಗಣಿಸಬಹುದು. ಅಲ್ಲಿ ಪ್ರಾಪಂಚಿಕ ವಿರಕ್ತಿ ಅಥವಾ ಅಲೌಕಿಕ ಅನುಭ ಆಸ್ವಾಧ್ಯವಾಗುವಂತೆ ಚಿತ್ರಕಲೆಯಲ್ಲೂ ಸಾಧ್ಯ ಎಂದರು.</p>.<p>ಮುಖ್ಯ ಅತಿಥಿಯಾಗಿದ್ದ ಚಿತ್ರಕಲಾವಿದ ವಿ.ಬಿ. ಬಿರಾದಾರ, ‘ಅಮೂರ್ತ ಚಿತ್ರಕಲೆ ಆಂತರಿಕ ಸೌಂದರ್ಯಾನುಭವ ನೀಡುತ್ತವೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ.ಎಚ್.ವಿ. ಮಂತೆಟ್ಟಿ ಮಾತನಾಡಿ, ‘ಮೂರ್ತ ಅಮೂರ್ತಗಳ ನಡುವೆ ಸಾಕಷ್ಟು ಅಂತರವಿದೆ. ನೋಡಲು ಸರಳವಾಗಿ ಕಂಡರೂ ಅಮೂರ್ತ ಕಲಾಕೃತಿಗಳನ್ನು ನೋಡಲು ಸರಳವಾಗಿ ಕಂಡರೂ ಅಮೂರ್ತ ಕಲಾಕೃತಿಗಳ ರಚನೆ ಸುಲಭವಲ್ಲ’ ಎಂದರು.</p>.<p>ಅಶೋಕ ಚಿತ್ತಕೋಟಿ ನಿರೂಪಿಸಿದರು. ಚಂದ್ರಶೇಖರ ಜಿ. ಪಾಟೀಲ ವಂದಿಸಿದರು. ಡಾ. ವಿ.ಜಿ. ಅಂದಾನಿ, ಲೋಕಯ್ಯಾ ಮಠಪತಿ, ರಾಜಶೇಖರ ಎಸ್, ಚಂದ್ರಹಾಸ ಜಾಲಿಹಾಳ, ಗೌತಮ ಅಂದಾನಿ, ಚಿತ್ರಶೇಖರ ಮರಪಳ್ಳಿ, ಗೌರೀಶ ಅಂದಾನಿ, ಮಹ್ಮದ ಅಯಾಜುದ್ದೀನ್ ಪಟೇಲ್, ಡಾ ರೆಹಮಾನ ಪಟೇಲ್, ಏಹೇಸಾನ್, ಡಾ ಶಾಹೀದ್ ಪಾಶಾ, ಶ್ರೀಶೈಲ್ ಗುಡೇದ, ನಾರಾಯಣ ಎಂ. ಜೋಶಿ ಇದ್ದರು.</p>.<p>ಡಿ 29ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವೀಕ್ಷಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>