ಕಲಬುರ್ಗಿ: ಕೊರೊನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದ ಕೂಡಲೇ ಇಲ್ಲಿನ ಭವಾನಿ ನಗರದ ಆಟೊ ಚಾಲಕ ಅಶೋಕ (55) ಎಂಬುವವರು ಮನೆಯಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಅಶೋಕ ಅವರ ಅಳಿಯನಿಗೆ ಸೋಂಕು ತಗುಲಿತ್ತು. ಆದ್ದರಿಂದ ಜುಲೈ 8ರಂದು ಕುಟುಂಬ ಸದಸ್ಯರೊಂದಿಗೆ ಕೊರೊನಾ ತಪಾಸಣೆಗೆ ಒಳಗಾಗಿದ್ದರು. 15 ದಿನಗಳ ಬಳಿಕ ಬುಧವಾರ ಬೆಳಿಗ್ಗೆ ಸಿಬ್ಬಂದಿ ಕರೆ ಮಾಡಿದ ಪಾಸಿಟಿವ್ ಬಂದಿರುವುದನ್ನು ದೃಢಪಡಿಸುತ್ತಿದ್ದಂತೆಯೇ ಕುಸಿದು ಬಿದ್ದು ಅಲ್ಲೇ ಸಾವಿಗೀಡಾದರು.
ಮರಣೋತ್ತರವಾಗಿ ಕೊರೊನಾ ಪರೀಕ್ಷೆ ನಡೆಸಿದಾಗ ಅವರಿಗೆ ನೆಗೆಟಿವ್ ಬಂದಿದೆ.