‘ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುವುದೆಂದು ಭಾವಿಸಿದ್ದೆವು. ಆರಂಭಿಕ ಹಂತದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ ವಿಶ್ವವಿದ್ಯಾಲಯದಲ್ಲಿ ಈಚೆಗೆ ಕಾನೂನುಬಾಹಿರ ನೇಮಕಾತಿ, ಹಣಕಾಸಿನ ವ್ಯವಹಾರ, ಕೋಮು ಗಲಾಟೆ ನಡೆಯುತ್ತಿವೆ. ಶೈಕ್ಷಣಿಕ ಚಟುವಟಿಕೆಗಳಿಗಿಂತ ರಾಜಕಾರಣವೇ ಹೆಚ್ಚು ಕೇಂದ್ರೀತವಾಗಿದೆ’ ಎಂದು ಅವರು ಆರೋಪಿಸಿದ್ದಾರೆ.