ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ 3300 ತಾಂಡಾಗಳಿದ್ದು, ಅವುಗಳ ಪೈಕಿ 476 ತಾಂಡಾಗಳಲ್ಲಿ ವಾಸಿಸುವವರಿಗೆ ಸೂಕ್ತ ದಾಖಲೆಗಳಿಲ್ಲ. ಕಂದಾಯ, ಖಾಸಗಿ ಹಾಗೂ ಅರಣ್ಯ ಇಲಾಖೆಯ ಒಡೆತನದಲ್ಲಿ ಬಹುತೇಕ ತಾಂಡಾಗಳಿವೆ. ಇಲ್ಲಿ ವಾಸಿಸುವವರಿಗೆ ಸೂಕ್ತ ಹಕ್ಕುಪತ್ರಗಳನ್ನು ವಿತರಿಸಲು ನೆರವಾಗುವಂತೆ ನಿಗಮದ ವಿಶೇಷ ಅಧಿಕಾರಿಯು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ತಹಶೀಲ್ದಾರ್ಗಳು ಹಾಗೂ ಭೂದಾಖಲೆಗಳ ಅಧಿಕಾರಿಗಳಿಗೆ ಕಂದಾಯ ದಾಖಲೆಗಳನ್ನು ತಯಾರಿಸಲು ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದರು.