ಹೊಸ ಕಾರು ಖರೀದಿಸುವುದಾಗಿ ಇಲ್ಲಿನ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಶಾಖೆಯೊಂದರಲ್ಲಿ ₹ 45 ಲಕ್ಷ ಸಾಲ ಪಡೆದು ವಂಚನೆ ಮಾಡಲಾಗಿದೆ. ಅಲ್ಲದೇ, ಬ್ಯಾಂಕ್ ಆಫ್ ಬರೋಡಾ ಸೇರಿ ಹಲವು ಬ್ಯಾಂಕ್ಗಳಲ್ಲಿ ಕೋಟಿಗಟ್ಟಲೆ ಸಾಲ ಪಡೆದು ವಂಚಿಸಿದ್ದಾರೆ. ಬಸವಂತರಾಯ ಪಾಟೀಲ ಮತ್ತು ಮೂರು ಜನರು ಸೇರಿಕೊಂಡು ನಂದಿ ಟೊಯೊಟಾ ಶೋ ರೂಮ್ನಿಂದ ಕೊಟೇಷನ್ ಪಡೆದು ಬಳಿಕ ಅದನ್ನ ನಕಲು ಮಾಡಿ ಬ್ಯಾಂಕ್ಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ಸಾಲಕ್ಕೆ ಅನುಮೋದನೆ ದೊರೆಯುತ್ತಿದ್ದಂತೆ ಬಸವಂತರಾಯ ತಾನು ಬಳಸುತ್ತಿದ್ದ ರಿಜಿಸ್ಟರ್ ಆಗದ ಕಾರಿನ ತಾತ್ಕಾಲಿಕ ಪಾಸಿಂಗ್ ದಾಖಲೆಯನ್ನು ನಕಲು ಮಾಡಿ ಕಾರು ಶೋರೂಮ್ನಿಂದ ಪಡೆದಿದ್ದಾಗಿ ಹೇಳಿ ಸಾಲ ಪಡೆಯುತ್ತಿದ್ದ. ಅಲ್ಲದೆ ಶೋ ರೂಂ ಹೆಸರಿನಲ್ಲೇ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನ ರಾಜಾನಕುಂಟೆಯ ಬ್ಯಾಂಕ್ನಲ್ಲಿ ಅಕೌಂಟ್ ತೆರೆದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.