ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರಿಗೆ ಬಾರಾಣಿ ಬ್ಯಾನಿ, ಸಂಭಾಳಿಸಿ ನಡ್ರೀ: ಅವಧೂತರ ನುಡಿ

ಕೆರೂರು ಬೀರಲಿಂಗೇಶ್ವರರ ಜಾತ್ರೆಯಲ್ಲಿ ಅವಧೂತರ ನುಡಿ
Last Updated 16 ನವೆಂಬರ್ 2020, 4:42 IST
ಅಕ್ಷರ ಗಾತ್ರ

ಆಳಂದ: ‘ಚಾರಣಿ ಬ್ಯಾನಿ ಜಾನುವಾರಿಗೆ ಬಂದರ, ಬಾರಾಣಿ ಬ್ಯಾನಿ ಮನುಷ್ಯರಿಗೆ ಬಂದೈತಿ, ಸಂಭಾಳಿಸಿರ್ ನಡ್ರೀ’ ಎಂಬ ಅವಧೂತನ ಹೇಳಿಕೆ ನುಡಿಗೆ ಜನರು ದಂಗಾದ ಪ್ರಸಂಗವು ಆಳಂದ ತಾಲ್ಲೂಕಿನ ಕೆರೂರು ಗ್ರಾಮದಲ್ಲಿ ಶನಿವಾರ ನಡೆಯಿತು.

ದೀಪಾವಳಿಯ ನರಕ ಚತುರ್ದಶಿ ದಿನದಂದು ಇಲ್ಲಿಯ ಕೆರೂರು ಬೀರಲಿಂಗೇಶ್ವರ ಜಾತ್ರೆಯು ಜರುಗುವುದು ವಾಡಿಕೆ. ದೇವರು ಮೈಮೇಲೆ ಬಂದಿದೆ ಎಂದು ಇಲ್ಲಿಯ ದೇವಸ್ಥಾನದ ಪೂಜಾರಿಗಳು ಒಡುಪು ಮಾತಿನಲ್ಲಿ ಹೇಳುವ ಹೇಳಿಕೆಯು ವಿಶಿಷ್ಟವಾದದು. ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಪಲ್ಲಕ್ಕಿ ಮುಂದೆ ಡೊಳ್ಳಿನ ಸದ್ದಿಗೆ ಪೂಜಾರಿಗಳ ಕುಣಿತವು ರೋಮಾಂಚನ ಉಂಟು ಮಾಡುವುದು.

‘ಮನುಷ್ಯನ ಪೀಡಾ ಯಾವದು ಬಿಚ್ಚ ಹೇಳಲಾ’ ಎಂದು ಪೂಜಾರಿ ಸವಾಲಿಗೆ ಮೊತ್ತಬ್ಬ ಅವಧೂತನು, ‘ಹೊರಗಿನ ಪೀಡಾ ಹೊರಗ ಹೋಯಿತಲಾ ತಾಳು’ ಎಂದಾಗ ಹಲವರು ಕೊರೊನಾ ಜತೆಗೆ ಹೊಲಿಕೆ ಮಾಡಿ ಸಮಾಧಾನ ಪಟ್ಟರು.

‘ಕೆಂಪು ಮುತ್ತ ಕಿಮ್ಮತ್ತ ಬದತ್ತದ’ ನುಡಿಗೆ ಮುಂದೆ ತೊಗರಿ ಬೆಳೆಗೆ ಬೆಲೆ ಹೆಚ್ಚುವದು ಎಂಬ ಅರ್ಥ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಬೀರಣ್ಣಾ ಪೂಜಾರಿ, ರಾಹುಲ ಪಾಟೀಲ, ಕಲ್ಯಾಣಿ ಬ್ಯಾಗಳ್ಳಿ, ಶ್ರೀಶೈಲ ಕೆರೂರು, ಬಾಬುರಾವ ಸುಳ್ಳದ, ಗುಂಡಪ್ಪ ಉದ್ದನಶೆಟ್ಟಿ, ಅಪ್ಪಾಸಾಹೇಬ ಅಂಜುಟಗಿ ಇದ್ದರು. ಸುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT