ಮೊದಲು ಪ್ರತಿ ಭೂಮಾಪಕನಿಗೆ ಒಬ್ಬ ಜವಾನರು ನೋಟಿಸ್ ಜಾರಿ ಮಾಡಲು ಇರುತ್ತಿದ್ದರು. ಈಗ ಯಾರೂ ಇರುವುದಿಲ್ಲ. ನೋಟಿಸ್ ನೀಡಲು ಸ್ಟಾಂಪ್ ನೀಡುತ್ತಿದ್ದರು. ಈಗ ನೀಡುತ್ತಿಲ್ಲ. ಹೀಗಾಗಿ ಭೂಮಾಪಕರೇ ಹಳ್ಳಿಗೆ ಹೋಗಿ ನೋಟಿಸ್ ನೀಡುವ ಪರಿಸ್ಥಿತಿ ಇದೆ. ಇಲಾಖೆಯಲ್ಲಿ ತಂತ್ರಾಂಶದ ಮುಖಾಂತರ ಕೆಲಸ ನಿರ್ವಹಿಸಲಾಗುತ್ತಿದೆ. ಪ್ರತಿ ಭೂಮಾಪಕನಿಗೆ ಸರ್ಕಾರದ ವತಿಯಿಂದ ಲ್ಯಾಪ್ಟ್ಯಾಪ್ ನೀಡಬೇಕು. ಬರೀ ಅಂಕಿ ಅಂಶಗಳಲ್ಲಿ ಪ್ರಗತಿಯಾಗದೇ ಗುಣಮಟ್ಟದಲ್ಲಿ ಕೆಲಸವಾಗಬೇಕು. ಹೀಗಾಗಿ ಈ ಮೊದಲಿನಂತೆ 18 ಕಡತಗಳು ನಿಗದಿ ಮಾಡಿದಲ್ಲಿ ಭೂಮಾಪಕರಿಗೆ ಸಮರ್ಪಕವಾಗಿ ಹಾಗೂಸುಗಮವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಈ ಎಲ್ಲ ಬೇಡಿಕೆಗಳಿಗೆಆಗ್ರಹಿಸಿ ಬೆಂಗಳೂರು ಚಲೊ ಹಮ್ಮಿಕೊಳ್ಳಲಾಗಿದೆ ಎಂದು ವೀರಣ್ಣ ಗಣಜಲಖೇಡ್ಧುತ್ತರಗಾಂವ್ ಹಾಗೂ ಭೂಮಾಪಕ ಸಂತೋಷ ಬೆಟ್ಟದ ತಿಳಿಸಿದ್ದಾರೆ.