ಎರಡು ದಿನಗಳ ಕಾಲ ಜಿಲ್ಲೆಯ ಪ್ರಮುಖ ಕಲೆಗಳನ್ನು ಪ್ರಸ್ತುತಪಡಿಸಲಾಯಿತು. ಬಸವನ ಸಂಗೋಳಗಿಯ ಬಸವೇಶ್ವರ ಭಜನಾ ಮಂಡಳಿಯ ಕಲಾವಿದರು ಮೊದಲು ವಿಘ್ನ ವಿನಾಯಕ ಗಜಮುಖ ಗಣನಾಥ ನಾಂದಿ ಪದವನ್ನು ಹಾಡಿದರು. ಇದಕ್ಕೆ ಹಿಮ್ಮೇಳನದ ರೂಪದಲ್ಲಿ ದೇಸಿ ವಾದ್ಯ ಪರಿಕರಗಳು ಪ್ರೇಕ್ಷಕರ ಮೈನವಿರೇಳಿಸಿದವು. ನಂತರ ಇದೇ ತಂಡದ ಕಲಾವಿದರು ‘ಬ್ರಹ್ಮ ಕಂಬಾರ ಮಾಡ್ಯಾನ ಗಡಗಿಯ ತಯ್ಯಾರ, ನಿರ್ಮಲ ಭಾವನೆ ನಿರಂಕಾರದಿಂದ ಅಡಗಿಯ ಮಾಡಬೇಕ್ರಿ’ ಎಂಬ ಸುಂದರ ಹಾಡನ್ನು ಪ್ರಸ್ತುತಪಡಿಸಿದರು.