ಪಟ್ಟಣದಲ್ಲಿ ಹರಿಯುವ ಚರಂಡಿ ನೀರನ್ನು ಒಂದು ಕಡೆ ಸಂಗ್ರಹಿಸಿ ನೀರು ಪುನರ್ ಬಳಕೆಗೆ ಯೋಗ್ಯವನ್ನಾಗಿ ಮಾಡಬೇಕು. ಆಗ ಮಾತ್ರ ಚರಂಡಿ ನೀರು ಭೀಮಾ ನದಿಗೆ ನೇರವಾಗಿ ಸೇರುವುದಿಲ್ಲ. ಇದರಿಂದ ಜನರಿಗೆ ಅನುಕೂಲ ಆಗುತ್ತದೆ. ನೀರಿನ ಸದ್ಬಳಕೆ ಆಗುತ್ತದೆ ಎಂದು ಪಟ್ಟಣದ ನಾಗರಿಕರಾದ ಸಿದ್ರಾಮಪ್ಪಾ ಮನ್ಮಿ, ಸದಾಶಿವ ಮೇತ್ರಿ, ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಜಮಾದಾರ್ ಸಲಹೆ ನೀಡಿದ್ದಾರೆ.