ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಸಂಗಮನಾಥ, 2022–23ನೇ ವರ್ಷವನ್ನು ಕಲಿಕಾ ಚೇತರಿಕೆ ವರ್ಷವಂದು ಆಚರಿಸಲಾಗುತ್ತಿದೆ. ಕೋವಿಡ್–19ನಿಂದ ಹಿಂದಿನ ದಿನಗಳಲ್ಲಿ18 ತಿಂಗಳ ಮಕ್ಕಳ ಕಲಿಕೆಯಲ್ಲಿ ಕುಂಠಿತವಾಗಿದೆ. ಆ ಕೊರತೆಯನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಬಹಳ ಅವಶ್ಯಕ. ಆದ್ದರಿಂದ ಶಾಲೆಗೆ ದಾಖಲಾದ ಮಗು ನಿರಂತರ ಶಾಲೆಗೆ ಹಾಜರಾಗಬೇಕು. ಜೊತೆಗೆ ಕಲಿಕೆಯಲ್ಲಿ ತೊಡಗಬೇಕು ಎಂದರು.