ಇದನ್ನು ತಿಳಿಯುತ್ತಿದ್ದಂತೆ ಭಾರತ ಮತ್ತು ಸೌದಿಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಸಂಸದ ಡಾ. ಉಮೇಶ ಜಾಧವ, ಫೂಲಸಿಂಗ್ ಮೋಹನ ಚವ್ಹಾಣ ಪತ್ತೆ ಹಚ್ಚಿ ಭಾರತಕ್ಕೆ ಮರಳಿಸಲು ಕೋರಿದ್ದರು. ಅದರಂತೆ ಫೂಲಸಿಂಗ್ ಅವರನ್ನು ಸೌದಿಯ ಅಧಿಕಾರಿಗಳು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ಧನಸಿಂಗ್ ನಾಯಕ ತಾಂಡಾದ ಮುಖಂಡ ಲಿಂಬಾಜಿ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.