‘ಬೆಳಕು ಮೂಡಿದಾಗ’ ಕೃತಿ ಪರಿಚಯಿಸಿದ ಗೋದುತಾಯಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನೀಲಾಂಬಿಕಾ ಪೊಲೀಸ್ ಪಾಟೀಲ, ‘ಈ ಕೃತಿಯಲ್ಲಿ ಕವಯತ್ರಿ ತಾವು ಕಂಡ ಹಾಗೂ ಅನುಕರಿಸಿದ ಆದರ್ಶನಗಳಿಗೆ ಶಾಬ್ದಿಕ ರೂಪ ನೀಡಿದ್ದಾರೆ. ಗೃಹಿಣಿಯ ಅನುಭವಗಳೇ ಒಂದು ಗಟ್ಟಿ ಸಾಹಿತ್ಯವಾಗಬಲ್ಲದು. ಮೊಬೈಲ್, ಧಾರಾವಾಹಿಗಳನ್ನು ಬಿಟ್ಟು ಹೊರಬಂದರೆ ಸಾಹಿತ್ಯದಂಥ ಅದ್ಭುತ ಕ್ಷೇತ್ರದಲ್ಲಿ ಬೆಳೆಯಬಹುದು’ ಎಂದು ಸಲಹೆ ನೀಡಿದರು.