ನಗರದ ಖೂಬಾ ಪ್ಲಾಟ್ ನಿವಾಸಿ, ಮೂಲತಃ ಕಮಲಾಪುರ ತಾಲ್ಲೂಕಿನ ಲಾಡಮುಗಳಿ ಗ್ರಾಮದ ಮಹೇಶ ರೇವಣಸಿದ್ದಪ್ಪ ಕಲಬುರ್ಗಿ (19) ಆಗಸ್ಟ್ 20ರಂದು ಮನೆಯ ಮಹಡಿ ಮೇಲಿಂದ ಬಿದ್ದಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ಪಾಲಕರು ತಮ್ಮ ಮಗನ ಅಂಗಾಂಗ ದಾನ ಮಾಡಲು ಒಪ್ಪಿದರು.