‘2018- 19ರ ಹಂಗಾಮಿನಲ್ಲಿ ಕಾರ್ಖಾನೆಯವರು ರೈತರ ₹ 11 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಪ್ರತಿ ಟನ್ ಕಬ್ಬಿಗೆ ನಿಯಮದಂತೆ ₹2,250 ದರ ನೀಡಬೇಕು. ಆದರೆ, ಕೇವಲ ₹ 2,100 ಪಾವತಿಸುವ ಮೂಲಕ ವಂಚಿಸುತ್ತಿದ್ದಾರೆ. ಕಾರ್ಖಾನೆಯವರು ಕಬ್ಬು ಕಟಾವು ಮಾಡಿಕೊಂಡು ಸಾಗಿಸಿದರೆ ಲೋಡ್ಗೆ ₹ 850 ದರ ಇದ್ದರೆ, ರೈತರೇ ಕಟಾವು ಮಾಡಿ ಸಾಗಿಸಿದರೆಕೇವಲ ₹ 650 ಕೊಡಲಾಗುತ್ತದೆ. ಇದರಿಂದ ರೈತರಿಗೆ ಪ್ರತಿ ಲೋಡ್ನಲ್ಲಿ ₹ 200 ನಷ್ಟವಾಗುತ್ತಿದೆ’ ಎಂದೂ ಅವರು ದೂರಿದರು.