ರಾಮಚಂದ್ರ ಗೋಪು ಅವರಿಗೆ ಎತ್ತು ಸೇರಿದ್ದಾಗಿದೆ. ಜೋಡೆತ್ತುಗಳನ್ನು ಹೊಲದಲ್ಲಿ ಬೇವಿನ ಮರದ ಕೆಳಗೆ ಕಟ್ಟಲಾಗಿತ್ತು. ಮಧ್ಯಾಹ್ನ ಮಳೆಯಾಗುತ್ತಿರುವಾಗ ಸಿಡಿಲು ಬಡಿದಿದೆ. ಅದರಲ್ಲಿ ಒಂದು ಎತ್ತು ಮೃತಪಟ್ಟಿದ್ದು, ಇನ್ನೊಂದು ಎತ್ತು ಗಾಯಗೊಂಡಿದೆ. ಕೆಲ ದಿನಗಳ ಹಿಂದೆ ₹1.50 ಲಕ್ಷಕ್ಕೆ ಈ ಜೋಡೆತ್ತುಗಳನ್ನು ಖರೀದಿಸಲಾಗಿತ್ತು. ಸುಮಾರು ₹ 80 ಸಾವಿರ ನಷ್ಟವಾಗಿದೆ. ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಶುರುವಾಗಲಿದ್ದು, ಉಳುಮೆಗೆ ತೊಂದರೆಯಾಗಲಿದೆ ಎಂದು ರೈತ ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.