ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ಭರ್ತಿಯಾಗಿದೆ. ಜಲಾಶ ಯದ ಗರಿಷ್ಠ ಮಟ್ಟ 1617.40. ಸದ್ಯ ಜಲಾಶಯದ ನೀರಿನ ಮಟ್ಟ 1617.20 ಅಡಿ ತಲುಪಿದೆ. ಪ್ರಯುಕ್ತ ಗೇಟು ಎತ್ತಿ 200 ಕ್ಯುಸೆಕ್ ನೀರು ನದಿಗೆ ಬಿಡಲಾಗುವುದು ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಕೈಲಾಸ ತಿಳಿಸಿದರು.
ಜಲಾಶಯಕ್ಕೆ 130 ಕ್ಯುಸೆಕ್ ಒಳಹರಿವಿದೆ. ಹೀಗಾಗಿ ಸರನಾಲಾ ನದಿಗೆ ನೀರು ಬಿಡಲಾಗುವುದು. ಜಲಾಶಯದ ಕೆಳಭಾಗದ ಹಾಗೂ ನದಿದಂಡೆಯ ಹಳ್ಳಿಗಳ ಜನರು ಎಚ್ಚರಿಕೆಯಿಂದ ಇರಬೇಕು.
ಸರನಾಲಾ ನದಿಯು ಮುಲ್ಲಾಮಾರಿ ನದಿಯ ಉಪ ನದಿಯಾಗಿದೆ. ನದಿಗೆ ನೀರು ಬಿಡುವುದರಿಂದ ನದಿಯಲ್ಲಿ ಪ್ರವಾಹ ಉಂಟಾಗಲಿದೆ. ಹೀಗಾಗಿ ನದಿಯ ಇಕ್ಕೆಲಗಳ ಗ್ರಾಮಗಳ ರೈತರು ನದಿಗೆ ಇಳಿಯುವುದಾಗಲಿ, ಎತ್ತುಗಳನ್ನು ನದಿ ದಂಡೆಯಲ್ಲಿ ಕಟ್ಟುವುದಾಗಲಿ ಮಾಡಬಾರದು ಎಂದಿದ್ದಾರೆ.