ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಶವವಾಗಿ ಪತ್ತೆ

Last Updated 3 ಆಗಸ್ಟ್ 2022, 5:51 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ): ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಕಾಲುವೆಯಲ್ಲಿ‌ ಮೀನು ಹಿಡಿಯಲು ಹೋಗಿ‌ ನಾಪತ್ತೆಯಾಗಿದ್ದ ತಂದೆ, ಮಗ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾದರು.

ರಾಜಪ್ಪ ಭೋವಿ(40) ಹಾಗೂ ಆತನ ಪುತ್ರ ಮಹೇಶ (12) ಶವವಾಗಿ ಪತ್ತೆಯಾದವರು.

ಮಂಗಳವಾರ ರಾಜಪ್ಪ ಸೇರಿ ಒಟ್ಟು ಐದು ಮಂದಿ ಮೀನು ಹಿಡಿಯಲು ಹೋಗಿದ್ದರು. ಕಾಲುವೆಗೆ ಇಳಿದ ರಾಜಪ್ಪ ಮತ್ತು ಮಹೇಶ ಇಬ್ಬರೂ ತುಂಬಾ ಹೊತ್ತಿನವರೆಗೆ ಮೇಲೆ ಬರಲಿಲ್ಲ. ಇದರಿಂದ ಆತಂಕಗೊಂಡ ಮೀನುಗಾರರು ಮತ್ತು ಗ್ರಾಮಸ್ಥರು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದರು.

ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ತಂದೆ, ಮಗನಿಗಾಗಿ ಶೋಧ ಕಾರ್ಯ‌ ನಡೆಸಿದ್ದರು ಪತ್ತೆಯಾಗಲಿಲ್ಲ. ರಾತ್ರಿ ‌ಆಗಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ಬುಧವಾರ ಬೆಳಿಗ್ಗೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾಲುವೆಯಲ್ಲಿ ಇಳಿದು ಶೋಧಿಸಿದಾಗ ಇಬ್ಬರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT