<p>ಚಿಂಚೋಳಿ: ತಾಲ್ಲೂಕಿನ ಸಾಲೇಬೀರನಹಳ್ಳಿ ಗ್ರಾಮದಲ್ಲಿ ರಾಮ ಮತ್ತು ಹನುಮನ ಆರಾಧನೆಯೊಂದಿಗೆ ವಿಶಿಷ್ಟವಾಗಿ ರಾಮನವಮಿ ಗುರುವಾರ ಆಚರಿಸಲಾಯಿತು.</p>.<p>ರಾಮಲಿಂಗೇಶ್ವರನ 6ನೇ ಜಾತ್ರೆ ಜೊತೆಗೆ ನೂತನವಾಗಿ ನಿರ್ಮಿಸಿದ ಹನುಮಾನ ಮಂದಿರದ ಕಳಸಾರೋಹಣವನ್ನು ಹಾರಕೂಡ ಚನ್ನವೀರ ಶಿವಾಚಾರ್ಯರು ನಡೆಸಿದರು.</p>.<p>ಹಾರಕೂಡ ಚನ್ನವೀರ ಶಿವಾಚಾರ್ಯರಿಗೆ ಸಾರೋಟಿನಲ್ಲಿ ಕೂರಿಸಿ ಮುಖ್ಯರಸ್ತೆಗಳಲ್ಲಿ ಕುಂಭ ಕಳಸ ಹಾಗೂ ವಾದ್ಯಮೇಳದ ಮೂಲಕ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.</p>.<p>ಬೆಳಿಗ್ಗೆ ರಾಮನವಮಿ ಅಂಗವಾಗಿ ರಾಮಲಿಂಗೇಶ್ವರನಿಗೆ ರುದ್ರಾಭಿಷೇಕ ಹಾಗೂ ತೊಟ್ಟಿಲೋತ್ಸವ ನಡೆಯಿತು.</p>.<p>ವೆಂಕಟಗಿರಿ ಶಿಕ್ಷಣ ಸಂಸ್ಥೆಯ ಶಾಂತಬಾಬು ಚಿಂಚೋಳಿಕರ್, ಚಂದ್ರಶೇಖರ ಪಾಟೀಲ, ಜನಾರ್ದನ ಕುಲಕರ್ಣಿ, ಪ್ರಭುಲಿಂಗ ಲೇವಡಿ, ಸಂಗಮನಾಥರೆಡ್ಡಿ ಶೇರಿಕಾರ, ರಾಜೇಂದ್ರರೆಡ್ಡಿ ಶೇರಿಕಾರ, ಮಹಿಬೂಬ ಪಟೇಲ್, ಅಶೋಕಕುಮಾರ ಪಾಟೀಲ, ಜಗನ್ನಾಥರೆಡ್ಡಿ ತುಮಕುಂಟಾ,ಜಗಪ್ಪ ಮಾಡಗಿ, ತುಕಾರಾಮ ಬಲ್ಲೆಮ್, ಚಂದ್ರಶೇಖರ ಲಕಶೆಟ್ಟಿ ಉಪಸ್ಥಿತರಿದ್ದರು.</p>.<p>ಅಫಜಲಪುರ: ‘ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಎಲ್ಲರ ಬದುಕು ಬಂಗಾರವಾಗಲಿದೆ’ ಎಂದು ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಬಡದಾಳ ಗ್ರಾಮದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ವತಿಯಿಂದ ರಾಮನವಮಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>‘ತಂದೆಗೆ ಕೊಟ್ಟ ಮಾತಿಗೆ ತಪ್ಪದೆ 14 ವರ್ಷ ವನವಾಸ ಅನುಭವಿಸಿದ ಶ್ರೀರಾಮ, ಅವನೊಂದಿಗೆ ಸಹೋದರ ಲಕ್ಣ್ಮಣ ಕೂಡ ವನವಾಸ ಅನುಭವಿಸಿದ್ದಾನೆ. ಇಬ್ಬರು ಆದರ್ಶಗಳ ಖಣಿಗಳಾಗಿದ್ದಾರೆ. ರಾಮನವಮಿ ದಿನದಂದು ಮಾತ್ರ ರಾಮನನ್ನು ಸ್ಮರಿಸುವ ಬದಲಿಗೆ ನಿತ್ಯ ರಾಮನ ಪೂಜೆ, ಸ್ಮರಣೆ ಮಾಡಬೇಕು’ ಎಂದರು.</p>.<p>ಬುಧವಾರ ರಾತ್ರಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಚನ್ನಮಲ್ಲೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು. ಸಂಜೆ ಶೋಭಾಯಾತ್ರೆ ಜರುಗಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-31-1569278055</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ತಾಲ್ಲೂಕಿನ ಸಾಲೇಬೀರನಹಳ್ಳಿ ಗ್ರಾಮದಲ್ಲಿ ರಾಮ ಮತ್ತು ಹನುಮನ ಆರಾಧನೆಯೊಂದಿಗೆ ವಿಶಿಷ್ಟವಾಗಿ ರಾಮನವಮಿ ಗುರುವಾರ ಆಚರಿಸಲಾಯಿತು.</p>.<p>ರಾಮಲಿಂಗೇಶ್ವರನ 6ನೇ ಜಾತ್ರೆ ಜೊತೆಗೆ ನೂತನವಾಗಿ ನಿರ್ಮಿಸಿದ ಹನುಮಾನ ಮಂದಿರದ ಕಳಸಾರೋಹಣವನ್ನು ಹಾರಕೂಡ ಚನ್ನವೀರ ಶಿವಾಚಾರ್ಯರು ನಡೆಸಿದರು.</p>.<p>ಹಾರಕೂಡ ಚನ್ನವೀರ ಶಿವಾಚಾರ್ಯರಿಗೆ ಸಾರೋಟಿನಲ್ಲಿ ಕೂರಿಸಿ ಮುಖ್ಯರಸ್ತೆಗಳಲ್ಲಿ ಕುಂಭ ಕಳಸ ಹಾಗೂ ವಾದ್ಯಮೇಳದ ಮೂಲಕ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.</p>.<p>ಬೆಳಿಗ್ಗೆ ರಾಮನವಮಿ ಅಂಗವಾಗಿ ರಾಮಲಿಂಗೇಶ್ವರನಿಗೆ ರುದ್ರಾಭಿಷೇಕ ಹಾಗೂ ತೊಟ್ಟಿಲೋತ್ಸವ ನಡೆಯಿತು.</p>.<p>ವೆಂಕಟಗಿರಿ ಶಿಕ್ಷಣ ಸಂಸ್ಥೆಯ ಶಾಂತಬಾಬು ಚಿಂಚೋಳಿಕರ್, ಚಂದ್ರಶೇಖರ ಪಾಟೀಲ, ಜನಾರ್ದನ ಕುಲಕರ್ಣಿ, ಪ್ರಭುಲಿಂಗ ಲೇವಡಿ, ಸಂಗಮನಾಥರೆಡ್ಡಿ ಶೇರಿಕಾರ, ರಾಜೇಂದ್ರರೆಡ್ಡಿ ಶೇರಿಕಾರ, ಮಹಿಬೂಬ ಪಟೇಲ್, ಅಶೋಕಕುಮಾರ ಪಾಟೀಲ, ಜಗನ್ನಾಥರೆಡ್ಡಿ ತುಮಕುಂಟಾ,ಜಗಪ್ಪ ಮಾಡಗಿ, ತುಕಾರಾಮ ಬಲ್ಲೆಮ್, ಚಂದ್ರಶೇಖರ ಲಕಶೆಟ್ಟಿ ಉಪಸ್ಥಿತರಿದ್ದರು.</p>.<p>ಅಫಜಲಪುರ: ‘ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಎಲ್ಲರ ಬದುಕು ಬಂಗಾರವಾಗಲಿದೆ’ ಎಂದು ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಬಡದಾಳ ಗ್ರಾಮದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ವತಿಯಿಂದ ರಾಮನವಮಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>‘ತಂದೆಗೆ ಕೊಟ್ಟ ಮಾತಿಗೆ ತಪ್ಪದೆ 14 ವರ್ಷ ವನವಾಸ ಅನುಭವಿಸಿದ ಶ್ರೀರಾಮ, ಅವನೊಂದಿಗೆ ಸಹೋದರ ಲಕ್ಣ್ಮಣ ಕೂಡ ವನವಾಸ ಅನುಭವಿಸಿದ್ದಾನೆ. ಇಬ್ಬರು ಆದರ್ಶಗಳ ಖಣಿಗಳಾಗಿದ್ದಾರೆ. ರಾಮನವಮಿ ದಿನದಂದು ಮಾತ್ರ ರಾಮನನ್ನು ಸ್ಮರಿಸುವ ಬದಲಿಗೆ ನಿತ್ಯ ರಾಮನ ಪೂಜೆ, ಸ್ಮರಣೆ ಮಾಡಬೇಕು’ ಎಂದರು.</p>.<p>ಬುಧವಾರ ರಾತ್ರಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಚನ್ನಮಲ್ಲೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು. ಸಂಜೆ ಶೋಭಾಯಾತ್ರೆ ಜರುಗಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-31-1569278055</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>