<p><strong>ಚಿಂಚೋಳಿ:</strong> ತಾಲ್ಲೂಕಿನ ವ್ಯಾವಹಾರಿಕ ಪಟ್ಟಣ ಸುಲೇಪೇಟದಲ್ಲಿ ಆರಾಧ್ಯದೈವ ವೀರಭದ್ರೇಶ್ವರ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಪ್ರಭಾವಳಿ ಉತ್ಸವ ಗುರುವಾರ ಬೆಳಿಗ್ಗೆ ಜರುಗಿತು.</p>.<p>ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಉತ್ಸವ ಮುಖ್ಯಬೀದಿಗಳಲ್ಲಿ 2 ಕಿ.ಮೀ ದೂರ ಸಾಗಿ ತೇರು ಮೈದಾನಕ್ಕೆ ಆಗಮಿಸಿ ಅಲ್ಲಿ, ಅಗ್ನಿ ಕುಂಡಕ್ಕೆ ಐದು ಸುತ್ತು ಹಾಕಿದ ಮೇಲೆ ಪ್ರಭಾವಳಿ ಭೂಸ್ಪರ್ಶ ಮಾಡಿತು. ಆಗ ನೆರೆದಿದ್ದ ಭಕ್ತರು ತಾವಿದ್ದ ಸ್ಥಳದಲ್ಲಿಯೇ ಭೂಮಿಗೆ ಹಣೆ ಮಣೆದು ಕೃತಾರ್ಥರಾದರು.</p>.<p>ಎರಡು ಬೃಹತ್ ಮರದ ದಿನ್ನೆಗಳನ್ನು ತೆಗೆದುಕೊಂಡು ಅದರ ಮೇಲೆ ಕಟ್ಟಿಗೆಯ ಹಲಿಗೆಗಳನ್ನು ಹಾಸಿ ಬಿಗಿದು ಕಟ್ಟಿ ಬಿದಿರಿನಿಂದ ತಯಾರಿಸಿದ ಪ್ರಭಾವಳಿಗೆ ಅಲಂಕಾರಿಕ ಮಿಂಚು ಹಾಗೂ ಬಣ್ಣದ ಕಾಗದ ಅಂಟಿಸಿ ಅದರಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಕೈಂಕರ್ಯ ನಡೆಸಿದರು. ಸಮತೋಲನಕ್ಕಾಗಿ ಸ್ವಾಮಿಯೊಬ್ಬರು ಪ್ರಭಾವಳಿಯಲ್ಲಿ ನಿಂತು ಹರಸಾಹಸ ಪಟ್ಟರೆ, ಬಿಳಿ ಬನಿಯನ್, ಬಿಳಿ ಲುಂಗಿ ಧರಿಸಿದ್ದ ಯುವಕರು ಬರಿಗಾಲಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಹಳೆ ಊರಿನ ಯುವಕರು ಒಂದು ಕಡೆ(ದಿನ್ನೆ) ಹಿಡಿದರೆ, ಹೊಸ ಊರಿನ ಯುವಕರು ಮತ್ತೊಂದು ಕಡೆಯ(ದಿನ್ನೆ) ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಪ್ರದಾಯ ಮುಂದುವರಿಸಿದರು.</p>.<p>ಅಗ್ಗಿ ತುಳಿಯುವ ಕೈಂಕರ್ಯವನ್ನು ಪುರವಂತ ನೂರಂದಯ್ಯ ಸ್ವಾಮಿ ನಡೆಸಿದರು. ಆರತಿ ಹಿಡಿದ ದೇಸಾಯಿ ಮೆನೆತನ ಗೃಹಿಣಿ ಕೆಂಡದಲ್ಲಿ ಹೆಜ್ಜೆ ಹಾಕಿದರು ನಂತರ ಭಕ್ತರು ಹಿಂಬಾಲಿಸಿದರು. ಗ್ರಾಮದಲ್ಲಿ ಹಲವೆಡೆ ದಾಸೋಹ ಏರ್ಪಡಿಸಲಾಗಿತ್ತು.</p>.<p>ಯುಗಾದಿ ಅಮಾವಾಸ್ಯೆಯಿಂದ ಪ್ರಾರಂಭವಾದ ಜಾತ್ರೆಯಲ್ಲಿ 19 ದಿನಗಳ ಕಾಲ ಜೋಡು ಪಲ್ಲಕ್ಕಿ ಉತ್ಸವ, 9 ದಿನಗಳ ಕಾಲ ಉಚ್ಚಾಯ ಮೆರವಣಿಗೆ ನಡೆಸಿ ರಥೋತ್ಸವದ ದಿನದಂದು ಬೆಳಿಗ್ಗೆ ಪ್ರಭಾವಳಿ ಉತ್ಸವ ನಡೆಸಿದರು. ಜಾತ್ರೆ ಮುಗಿಯುವವರೆಗೆ ಗ್ರಾಮದಲ್ಲಿ ಯಾರು ಹೊಸ ಬಟ್ಟೆ ಧರಿಸುವುದಿಲ್ಲ. ಶುಭ ಕಾರ್ಯಗಳು ನಡೆಸುವುದಿಲ್ಲ, ಎಷ್ಟೇ ದೂರವಿದ್ದರೂ ಜಾತ್ರೆಗೆ ಗ್ರಾಮಕ್ಕೆ ಬಂದು ದೇವರ ದರ್ಶನ ಮಾಡಿ ಮತ್ತೆ ಮರಳುವುದು ವಾಡಿಕೆಯಾಗಿದೆ.</p>.<div><div class="bigfact-title">ಅದ್ದೂರಿ ರಥೋತ್ಸವ</div><div class="bigfact-description">ಸುಲೇಪೇಟ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ 6ಗಂಟೆಗೆ ರಥೋತ್ಸವ ನಡೆಸಿದರು. ಜಾತ್ರೆಯ ಅಂಗವಾಗಿ ಕುಸ್ತಿ ಪಂದ್ಯಾವಳಿ ಶುಕ್ರವಾರ ಬೆಳಿಗ್ಗೆ ಹಾಗೂ ಸಂಜೆಗೆ ಆಯೋಜಿಸಲಾಗಿದೆ. ತಡರಾತ್ರಿ ಬಣ್ಣದೋಕುಳಿ ನಡೆಸಿ ಜಾತ್ರೆಗೆ ಪೂರ್ಣವಿರಾಮ ಹಾಕುವರು. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ತಾಲ್ಲೂಕಿನ ವ್ಯಾವಹಾರಿಕ ಪಟ್ಟಣ ಸುಲೇಪೇಟದಲ್ಲಿ ಆರಾಧ್ಯದೈವ ವೀರಭದ್ರೇಶ್ವರ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಪ್ರಭಾವಳಿ ಉತ್ಸವ ಗುರುವಾರ ಬೆಳಿಗ್ಗೆ ಜರುಗಿತು.</p>.<p>ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಉತ್ಸವ ಮುಖ್ಯಬೀದಿಗಳಲ್ಲಿ 2 ಕಿ.ಮೀ ದೂರ ಸಾಗಿ ತೇರು ಮೈದಾನಕ್ಕೆ ಆಗಮಿಸಿ ಅಲ್ಲಿ, ಅಗ್ನಿ ಕುಂಡಕ್ಕೆ ಐದು ಸುತ್ತು ಹಾಕಿದ ಮೇಲೆ ಪ್ರಭಾವಳಿ ಭೂಸ್ಪರ್ಶ ಮಾಡಿತು. ಆಗ ನೆರೆದಿದ್ದ ಭಕ್ತರು ತಾವಿದ್ದ ಸ್ಥಳದಲ್ಲಿಯೇ ಭೂಮಿಗೆ ಹಣೆ ಮಣೆದು ಕೃತಾರ್ಥರಾದರು.</p>.<p>ಎರಡು ಬೃಹತ್ ಮರದ ದಿನ್ನೆಗಳನ್ನು ತೆಗೆದುಕೊಂಡು ಅದರ ಮೇಲೆ ಕಟ್ಟಿಗೆಯ ಹಲಿಗೆಗಳನ್ನು ಹಾಸಿ ಬಿಗಿದು ಕಟ್ಟಿ ಬಿದಿರಿನಿಂದ ತಯಾರಿಸಿದ ಪ್ರಭಾವಳಿಗೆ ಅಲಂಕಾರಿಕ ಮಿಂಚು ಹಾಗೂ ಬಣ್ಣದ ಕಾಗದ ಅಂಟಿಸಿ ಅದರಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಕೈಂಕರ್ಯ ನಡೆಸಿದರು. ಸಮತೋಲನಕ್ಕಾಗಿ ಸ್ವಾಮಿಯೊಬ್ಬರು ಪ್ರಭಾವಳಿಯಲ್ಲಿ ನಿಂತು ಹರಸಾಹಸ ಪಟ್ಟರೆ, ಬಿಳಿ ಬನಿಯನ್, ಬಿಳಿ ಲುಂಗಿ ಧರಿಸಿದ್ದ ಯುವಕರು ಬರಿಗಾಲಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಹಳೆ ಊರಿನ ಯುವಕರು ಒಂದು ಕಡೆ(ದಿನ್ನೆ) ಹಿಡಿದರೆ, ಹೊಸ ಊರಿನ ಯುವಕರು ಮತ್ತೊಂದು ಕಡೆಯ(ದಿನ್ನೆ) ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಪ್ರದಾಯ ಮುಂದುವರಿಸಿದರು.</p>.<p>ಅಗ್ಗಿ ತುಳಿಯುವ ಕೈಂಕರ್ಯವನ್ನು ಪುರವಂತ ನೂರಂದಯ್ಯ ಸ್ವಾಮಿ ನಡೆಸಿದರು. ಆರತಿ ಹಿಡಿದ ದೇಸಾಯಿ ಮೆನೆತನ ಗೃಹಿಣಿ ಕೆಂಡದಲ್ಲಿ ಹೆಜ್ಜೆ ಹಾಕಿದರು ನಂತರ ಭಕ್ತರು ಹಿಂಬಾಲಿಸಿದರು. ಗ್ರಾಮದಲ್ಲಿ ಹಲವೆಡೆ ದಾಸೋಹ ಏರ್ಪಡಿಸಲಾಗಿತ್ತು.</p>.<p>ಯುಗಾದಿ ಅಮಾವಾಸ್ಯೆಯಿಂದ ಪ್ರಾರಂಭವಾದ ಜಾತ್ರೆಯಲ್ಲಿ 19 ದಿನಗಳ ಕಾಲ ಜೋಡು ಪಲ್ಲಕ್ಕಿ ಉತ್ಸವ, 9 ದಿನಗಳ ಕಾಲ ಉಚ್ಚಾಯ ಮೆರವಣಿಗೆ ನಡೆಸಿ ರಥೋತ್ಸವದ ದಿನದಂದು ಬೆಳಿಗ್ಗೆ ಪ್ರಭಾವಳಿ ಉತ್ಸವ ನಡೆಸಿದರು. ಜಾತ್ರೆ ಮುಗಿಯುವವರೆಗೆ ಗ್ರಾಮದಲ್ಲಿ ಯಾರು ಹೊಸ ಬಟ್ಟೆ ಧರಿಸುವುದಿಲ್ಲ. ಶುಭ ಕಾರ್ಯಗಳು ನಡೆಸುವುದಿಲ್ಲ, ಎಷ್ಟೇ ದೂರವಿದ್ದರೂ ಜಾತ್ರೆಗೆ ಗ್ರಾಮಕ್ಕೆ ಬಂದು ದೇವರ ದರ್ಶನ ಮಾಡಿ ಮತ್ತೆ ಮರಳುವುದು ವಾಡಿಕೆಯಾಗಿದೆ.</p>.<div><div class="bigfact-title">ಅದ್ದೂರಿ ರಥೋತ್ಸವ</div><div class="bigfact-description">ಸುಲೇಪೇಟ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ 6ಗಂಟೆಗೆ ರಥೋತ್ಸವ ನಡೆಸಿದರು. ಜಾತ್ರೆಯ ಅಂಗವಾಗಿ ಕುಸ್ತಿ ಪಂದ್ಯಾವಳಿ ಶುಕ್ರವಾರ ಬೆಳಿಗ್ಗೆ ಹಾಗೂ ಸಂಜೆಗೆ ಆಯೋಜಿಸಲಾಗಿದೆ. ತಡರಾತ್ರಿ ಬಣ್ಣದೋಕುಳಿ ನಡೆಸಿ ಜಾತ್ರೆಗೆ ಪೂರ್ಣವಿರಾಮ ಹಾಕುವರು. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>