ಪಟ್ಟಣದ ಆಶ್ರಯ ಬಡಾವಣೆ, ಕೊಳಚೆ ಮಂಡಳಿ ಮನೆಗಳ ಬಡಾವಣೆ, ಚಿನ್ನಮಳ್ಳಿ ಲೇಔಟ್ ಜನರು ಹಾಗೂ ಇಟಗಾ, ಮೊಗಲಾ ಗ್ರಾಮಗಳ ಮತ್ತು ತಾಂಡಾ ಜನರು ಇದೇ ರಸ್ತೆಯ ಮೂಲಕ ಪಟ್ಟಣದೊಳಗೆ ಬಂದು ಹೋಗಬೇಕು. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಂಚರಿಸಲು ಜನರಿಗೆ ಕಷ್ಟ, ತೊಂದರೆಯಾದರೂ ಆಡಳಿತ ಮಾತ್ರ ತೆಪ್ಪಗೆ ಕುಳಿತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.