ಬಸವೇಶ್ವರ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಹಿಂದುಗಡೆ ಹೋಟೆಲ್ ಮತ್ತು ವಿವಿಧ ಅಂಗಡಿಗಳ ಹಿಂದುಗಡೆ ಖಾಲಿ ನಿವೇಶನ ಜಾಗವನ್ನು ಸ್ಥಳೀಯರು ಕೆರೆ ಎಂದೇ ಕೆರೆಯುತ್ತಾರೆ. ಇದರಲ್ಲಿ ಸಂಗ್ರಹವಾದ ನೀರು ಬೇರೆ ಹೋಗಲು ದಾರಿ ಇಲ್ಲ. ಇದರ ಸುತ್ತಲೂ ಟಿಪ್ಪು ಸುಲ್ತಾನ್, ಅಂಬಿಗರ ಚೌಡಯ್ಯ ಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಇವು ಹೊಲಸು ನೀರಿನಿಂದ ಆವೃತವಾಗಿವೆ.ಇದರ ಪಕ್ಕದಲ್ಲಿಯೇ ವಾಣಿಜ್ಯ ಸಂಕೀರ್ಣಗಳು, ತರಕಾರಿ, ಮಾಂಸ ಮಾರಾಟ ಅಂಗಡಿಗಳು ಇವೆ. ವಾರದ ಸಂತೆ ಇದರ ಬಳಿಯೇ ನಡೆಯುತ್ತದೆ.