ನಾಲವಾರ, ಲಾಡ್ಲಾಪುರ, ತರಕಸ್ ಪೇಟ್, ಕೊಲ್ಲೂರು, ಮಾರಡಗಿ, ಸನ್ನತ್ತಿ, ಹಲಕರ್ಟಿ, ಚಾಮನೂರು, ಬಳವಡ್ಗಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಹಲಕರ್ಟಿ, ಬಳವಡ್ಗಿ, ಕಡಬೂರು, ದೇವಾಪೂರ ಗ್ರಾಮಗಳಿಗೆ ಹೊಂದಿಕೊಂಡು ಹರಿಯುವ ಹಳ್ಳದ ಸುತ್ತಲಿನ ಜಮೀನುಗಳ ಬಹುತೇಕ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ. ನೀರಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಕಪ್ಪು ಮಣ್ಣಿನಲ್ಲಿ ಬಿತ್ತನೆ ಮಾಡಲಾಗಿರುವ ಹತ್ತಿ ಬೆಳೆಗಳಿಗೆ ರೋಗ ಆವರಿಸಿಕೊಳ್ಳುತ್ತಿದೆ. ನೀರು ಬಸಿದು ಹೋಗುವ ಮಸಾರಿ ಭೂಮಿಯಲ್ಲಿ ಸಹ ರೋಗದ ಛಾಯೆ ಕಂಡುಬರುತ್ತಿದೆ. ಹತ್ತಿ ವಾರ್ಷಿಕ ಬೆಳಯಾಗಿದ್ದು, ರೈತರ ವರ್ಷದ ಶ್ರಮಕ್ಕೆ ಸಂಚಕಾರ ಎದುರಾಗಿದೆ.