ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ನಗರದ ದಂಪತಿ ದುರ್ಮರಣ

Last Updated 26 ಆಗಸ್ಟ್ 2019, 6:43 IST
ಅಕ್ಷರ ಗಾತ್ರ

ಕಲಬುರ್ಗಿ: ನೆರೆಯ ಮಹಾರಾಷ್ಟ್ರದ ನಳದುರ್ಗ ಬಳಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ ಶಹಾಬಜಾರನ ಉದ್ಯಮಿ ದಂಪತಿ ಬಲಿಯಾಗಿದ್ದಾರೆ.

ರಜಪೂತ ಸಮಾಜದ ಖಜಾಂಚಿಯಾಗಿದ್ದ ಉದ್ಯಮಿ ರಾಜೀವ ಶುಕ್ಲಾ (52) ಮತ್ತು ಅವರ ಪತ್ನಿ ನೇಹಾ (48) ಮೃತಪಟ್ಟವರು.

ದಂಪತಿ ಕಲಬುರ್ಗಿಯಿಂದ ಕಾರಿನಲ್ಲಿ ತುಳಜಾಪುರಕ್ಕೆ ಹೋಗಿ ಅಂಬಾಭವಾನಿ ದೇವಿ ದರ್ಶನ ಪಡೆದುಕೊಂಡು ಸಂಜೆ ಮರಳಿ ಬರುತ್ತಿದ್ದ ವೇಳೆಯಲ್ಲಿ ನಳದುರ್ಗ ಬಳಿಯಲ್ಲಿ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆಯಿತು. ಇದರಿಂದಾಗಿ ಕಾರು ನುಜ್ಜುಗುಜ್ಜಾಗಿ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕೊನೆಯುಸಿಳೆದಿದ್ದಾರೆ.

ಸುದ್ದಿ ತಿಳಿಯುತ್ತಲೇ ಕಲರ್ಗಿಯಿಂದ ಅವರ ಸಂಬಂಧಿಗಳು ನಳದುರ್ಗಕ್ಕೆ ದೌಡಾಯಿಸಿದರು. ಸ್ಥಳಕ್ಕೆ ನಳದುರ್ಗ ಪೊಲೀಸರು ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಭಾನುವಾರ ಶಹಾಬಜಾರಗೆ ಸಮೀಪದಲ್ಲಿರುವ ರಾಜ್ ಟಾಕೀಸ್ ಹಿಂಭಾಗದಲ್ಲಿರುವ ರಜಪೂತ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT