ಸುದ್ದಿ ತಿಳಿಯುತ್ತಲೇ ಕಲರ್ಗಿಯಿಂದ ಅವರ ಸಂಬಂಧಿಗಳು ನಳದುರ್ಗಕ್ಕೆ ದೌಡಾಯಿಸಿದರು. ಸ್ಥಳಕ್ಕೆ ನಳದುರ್ಗ ಪೊಲೀಸರು ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಭಾನುವಾರ ಶಹಾಬಜಾರಗೆ ಸಮೀಪದಲ್ಲಿರುವ ರಾಜ್ ಟಾಕೀಸ್ ಹಿಂಭಾಗದಲ್ಲಿರುವ ರಜಪೂತ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.