ಈ ಕುರಿತು ಪ್ರತಿಕ್ರಿಯೆ ನೀಡಿದ ಗುತ್ತಿಗೆದಾರ ಬಸಲಿಂಗಪ್ಪ, 'ಕಳೆದ 19 ತಿಂಗಳಿಂದ ಸಾಲ ಸೋಲ ಮಾಡಿ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದೇವೆ. ಪಾಲಿಕೆಯಿಂದ ₹ 7.5 ಕೋಟಿ ಬಾಕಿ ಬರಬೇಕಿದೆ. ಸದ್ಯಕ್ಕೆ ಐದು ತಿಂಗಳ ಬಾಕಿಯನ್ನಾದರೂ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ, ಅಧಿಕಾರಿಗಳು ಬಾಕಿ ನೀಡುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಹೀಗಾಗಿ ಉಚಿತವಾಗಿ ಊಟ, ಉಪಾಹಾರ ಕೊಡುತ್ತಿಲ್ಲ. ಬೇಕಿದ್ದರೆ ಕ್ಯಾಂಟೀನ್ ಮುಚ್ಚುತ್ತೇವೆ' ಎಂದರು.