ಕರಜಗಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸುಮಾರು 812 ಮಕ್ಕಳಿದ್ದಾರೆ. ಗುರುವಾರ ಎಲ್ಲಾ ಮಕ್ಕಳು ಏಕ ಕಾಲಕ್ಕೆ ಅಕ್ಕಿ ಪಡೆಯಲು ಶಾಲೆಗೆ ಬಂದಿದ್ದರಿಂದ ಅಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆ ಆಗಿರಲಿಲ್ಲ. ಪರಿಸ್ಥಿತಿ ತಿಳಿಗೊಳಿಸಲು ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಜ್ಜನ ಹಾಗೂ ಮೇಲ್ವಿಚಾರಕ ದೀಪಕ ಶೆಟ್ಟಿ ಶಾಲೆಗೆ ಭೇಟಿ ನೀಡಿದ್ದರು. ಶುಕ್ರವಾರದಿಂದ ಮಕ್ಕಳ ಮನೆ ಮನೆಗೆ ತೆರಳಿ ಆಹಾರ ಧಾನ್ಯ ಹಂಚಿಕೆ ಮಾಡಲು ತಾಕೀತು ಮಾಡಿದರು.