ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಕಳೆದ ಮೂರು, ನಾಲ್ಕು ದಿನಗಳಲ್ಲಿ ಸುಳ್ಯದಲ್ಲಿ ಎರಡು ಮತ್ತು ಸುರತ್ಕಲ್ನಲ್ಲಿ ಒಂದು ಒಟ್ಟು ಮೂವರ ಕೊಲೆಗಳಾಗಿವೆ. ಇದರಿಂದ ಜಿಲ್ಲೆ ಮತ್ತು ರಾಜ್ಯ ತಲ್ಲಣಗೊಂಡಿವೆ. ಮತಾಂಧ ಹಾಗೂ ಕೊಲೆಗಡುಕ ಹೇಡಿತನದ ರಾಜಕಾರಣ ಖಂಡನೀಯ. ಈ ಕೊಲೆಗಡುಕ ರಾಜಕಾರಣವು ರಾಜ್ಯದ ಅಭಿವೃದ್ಧಿಗೆ ಮತ್ತು ಸೌಹಾರ್ದತೆಗೆ ಅಪಾಯವನ್ನುಂಟು ಮಾಡಲಿದೆ. ರಾಜ್ಯ ಸರ್ಕಾರ ಈ ಕೂಡಲೇ, ಈ ಎಲ್ಲ ಕೊಲೆಗಳ ನೆಲೆಯನ್ನು ಭೇದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.