ಆಳಂದ ತಾಲ್ಲೂಕಿನ ಮಟಕಿ ಗ್ರಾಮದ ಬಸಣ್ಣ ಸಿದ್ರಾಮಪ್ಪ ಬಿರಾದಾರ (55) ಮೃತರು. ಹಲವು ವರ್ಷಗಳಿಂದ ಅವರು ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ಹಬ್ಬದ ದಿನವಾದರೂ ಅವರಿಗೆ ಸೋಮವಾರ ರಜೆ ಇರಲಿಲ್ಲ. ರಾತ್ರಿ ಭದ್ರತಾ ಕೆಲಸಕ್ಕೆ ಹಾಜರಾಗಿದ್ದ ಅವರು ಬೆಳಿಗ್ಗೆ 7ಕ್ಕೆ ತಮ್ಮ ಕೆಲಸದ ಸರದಿ ಮುಗಿಸಿದ್ದರು. ಆದರೆ, ಬೆಳಗಿನ ಶಿಫ್ಟ್ನಲ್ಲಿ ಕೆಲಸ ಮಾಡುವವರು ಬಾರದ ಕಾರಣ ಹೆಚ್ಚುವರಿ ಡ್ಯೂಟಿ ಮುಂದುವರಿಸಿದ್ದರು.