ಭಾನುವಾರ ಕೂಲಿಯಾಳುಗಳ ನೆರವಿನಿಂದ ಈರಪ್ಪ, ತೊಗರಿ ಕಟಾವು ಮಾಡಿ, ಹೊಲದಲ್ಲೇ ಒಂದು ಬದಿಯಲ್ಲಿ ಸಂಗ್ರಹಿಸಿದ್ದರು. ಉಳಿದಿದ್ದ ತೊಗರಿ ಕಟಾವು ಮಾಡಲು ಸೋಮವಾರ ಆಳುಗಳೊಂದಿಗೆ ಬಂದಾಗ, ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ತಕ್ಷಣವೇ ಬೆಂಕಿ ನಂದಿಸಲು ತೊಡಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಟಾವು ಮಾಡಿ ಇಟ್ಟಿದ್ದ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.