‘ಕಪ್ಪತಗುಡ್ಡ ಸಂರಕ್ಷಣೆಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದು ಗದುಗಿನ ತೋಂಟದಾರ್ಯ ಮಠದ ಸ್ವಾಮೀಜಿ. ಆದರೆ, ಇದು ಬಿಜೆಪಿ ಹೋರಾಟದ ಫಲ ಎಂದು ಪ್ರಧಾನಿ ಮತ್ತೊಂದು ದೊಡ್ಡ ಸುಳ್ಳು ಹೇಳಿದ್ದಾರೆ. 2011ರಲ್ಲಿ ಪೋಸ್ಕೊ ಕಂಪೆನಿ ಮೂಲಕ ಕಪ್ಪತಗುಡ್ಡ ಕಬಳಿಸುವ ಹುನ್ನಾರ ಮಾಡಿದ್ದು ಯಾರು, ಆಗ ನೀವು ಎಲ್ಲಿದ್ದೀರಿ, ಈಗ ಜೈಲು, ಬೇಲು ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಏನು ಹೇಳುತ್ತಿದ್ದೀರಿ’ ಎಂದು ವಾಗ್ದಾಳಿ ನಡೆಸಿದರು.