ಕಲಬುರ್ಗಿ: ನಗರದಲ್ಲಿ ಈಚೆಗೆ ಮಿಲ್ಲತ್ ನಗರದ ಜಿಶಾನ್ ಉಸ್ಮಾನ್ (25) ಎಂಬ ಯುವಕನಿಗೆ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಯದುಲ್ಲಾ ಕಾಲೊನಿಯ ಕಮಾಲೆ ಮುಜರತ್ ದರ್ಗಾ ಹತ್ತಿರದ ನಿವಾಸಿಗಳಾದ ನದೀಮ್ಪಾಸಾ ಮನ್ನಾಶೇಖ್ (26), ನಯೀಮ್ ಮನ್ನಾಶೇಖ್ (25) ಹಾಗೂ ರಹೀಮ್ ಮನ್ನಾಶೇಖರ್ (22) ಬಂಧಿತರು.