ಡೆತ್ನೋಟ್ನಲ್ಲಿ ಏನಿದೆ?: ‘ನಾನು ಮತ್ತು ನನ್ನ ಪತ್ನಿ ನಮ್ಮ ಪಾಡಿಗೆ ಇದ್ದೆವು. ಯಾವುದೇ ತಪ್ಪು ಮಾಡಿಲ್ಲ. ಇವರು ಸುಮ್ಮನೇ ನಮ್ಮ ಮೇಲೆ ಆರೋಪ ಮಾಡಿ, ನನಗೆ ತುಂಬ ತೊಂದರೆ ಕೊಟ್ಟರು. ಇವತ್ತು ಎಫ್ಐಆರ್ ಮಾಡಿ ನನ್ನ ಮತ್ತು ಹೆಂಡತಿಯನ್ನು ಜೈಲಿಗೆ ಕಳಿಸುವುದಾಗಿ ಹೇಳಿದರು. ನಾನು ತುಂಬಾ ಮರಿಯಾದಸ್ತ. ಹಾಗಾಗಿ, ತುಂಬಾ ನೊಂದುಕೊಂಡಿದ್ದೇನೆ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಏಕೆ? ನನ್ನ ಸಾವಿಗೆ ಸಾಯಿಬಣ್ಣ ಜೋಗುರ, ಶರಣಮ್ಮ ನಾಟಿಕರ, ಪ್ರತಿಭಾ ನಾಗೇಶ ಹಾಗೂ ಪ್ರತಿಭಾಳ ತಾಯಿ ಇವರೆಲ್ಲರೂ ಕಾರಣ. ನಾನು ಏನೂ ತಪ್ಪು ಮಾಡಿಲ್ಲ. ನಾನು ಮಾಡಿದ ತಪ್ಪೆಂದರೆ ನನ್ನ ಹೆಂಡತಿ– ಮಕ್ಕಳಿಗೆ ಕೈಬಿಟ್ಟು ಹೋಗುತ್ತಿರುವುದು. ನನ್ನನ್ನು ಕ್ಷಮಿಸು ಸೀತಾ, ಐ ಮಿಸ್ ಯು’ ಎಂದು ಮನೋಜ ಬರೆದಿಟ್ಟ ಡೆತ್ನೋಟ್ನಲ್ಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.