ನಗರದ ಕಾಕಡೆ ಚೌಕ್ನ ನಿವಾಸಿ ಸುನೀಲಕುಮಾರ ಶ್ರೀಮಂತ (28) ಆತ್ಮಹತ್ಯೆ ಮಾಡಿಕೊಂಡವರು. ಈ ಯುವಕ ಮದ್ಯ ಕುಡಿದ ಅಮಲಿನಲ್ಲಿ ಮನೆ ಬಿಟ್ಟು ಹೋಗಿದ್ದ. ಮೂರು ದಿನಗಳ ನಂತರ ಫರಹಾತಾಬಾದ್ ಬಳಿಯ ಹೊಲವೊಂದರಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ‘ಡೆತ್ನೋಟ್’ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.