ಯಡ್ರಾಮಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ 70 ಮಿ.ಮೀ ಮಳೆಯಾಗಿದೆ. ಇಜೇರಿ, ಬಳಬಟ್ಟಿ, ವಡಗೇರಾ, ಅರಳಗುಂಡಗಿ, ಕರಕಿಹಳ್ಳಿ, ಬಿಳವಾರ, ಯಲಗೋಡ, ಆಲೂರ, ಕುಕನೂರ, ಸುಂಬಡ, ಮಾಗಣಗೇರಾ, ಕಡಕೋಳ, ಸಾಥಖೇಡ ಭಾಗಗಳಲ್ಲಿ ಭಾರಿ ಮಳೆಯಾಗಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಸತತ ಮಳೆ ಹತ್ತಿ, ತೊಗರಿ ಬೆಳೆಗಳ ಬೆಳವಣಿಗೆಗೆ ಪೆಟ್ಟು ನೀಡಿದೆ. ಇದರ ಜೊತೆ ರಸಗೊಬ್ಬರ ನೀಡಿದರೂ ನಿರೀಕ್ಷೆಗೆ ತಕ್ಕಂತೆ ಗಿಡಗಳು ಬೆಳೆಯದೆ ರೋಗದ ಗೂಡಾಗಿ ಮಾರ್ಪಟ್ಟಿರುವುದು ರೈತರನ್ನು ಚಿಂತೆಗೀಡು ಮಾಡಿದೆ.