‘ಅಂತಿಮ ದಿನಾಂಕವನ್ನು ಜೂನ್ 24ರ ಬದಲು ಜೂನ್ 20ಕ್ಕೆ ನಿಗದಿ ಮಾಡಿದ ಬಗ್ಗೆ ನಮಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ನಮ್ಮ ಮೊಬೈಲ್ ಸಂಖ್ಯೆ, ಇ–ಮೇಲ್ ವಿಳಾಸ, ಅಂಚೆ ವಿಳಾಸ ಎಲ್ಲವೂ ಅರ್ಜಿಯಲ್ಲಿತ್ತು. ಅದೆಲ್ಲ ಆಗದಿದ್ದರೂ ಪರವಾಗಿಲ್ಲ. ಪತ್ರಿಕೆಯಲ್ಲಾದರೂ ಪ್ರಕಟಣೆ ನೀಡಬಹುದಿತ್ತು. ಈ ಬಗ್ಗೆ ಪ್ರಶ್ನಿಸಿದರೆ ವೆಬ್ಸೈಟ್ ನೋಡಬೇಕಿತ್ತು ಎಂದು ಸಿಬ್ಬಂದಿ ಹೇಳಿದರು. ನಮ್ಮ ಅರ್ಜಿಗಳನ್ನೂ ಪರಿಗಣಿಸಬೇಕು’ ಎಂದು ಬಳ್ಳಾರಿ ಜಿಲ್ಲೆಯಿಂದ ಬಂದ ಅಭ್ಯರ್ಥಿಯೊಬ್ಬರು ಮನವಿ ಮಾಡಿದರು.