ಕೇಂದ್ರ ಬಸ್ ನಿಲ್ದಾಣ, ಜೇವರ್ಗಿ ಕ್ರಾಸ್, ಜಗತ್ ಸರ್ಕಲ್, ಸೂಪರ್ ಮಾರ್ಕೆಟ್, ನೆಹರೂ ಗಂಜ್, ಕಿರಾಣಾ ಬಜಾರ, ಸೇಡಂ ರಸ್ತೆ, ಹುಮನಾಬಾದ ರಿಂಗ್ ರಸ್ತೆ, ಗಂಜ್, ಎಂಎಸ್ಕೆ ಮಿಲ್, ಮುಸ್ಲಿಂ ಚೌಕ, ಖಾದ್ರಿ ಚೌಕ್, ಆಳಂದ ಚೆಕ್ ಪೋಸ್ಟ್, ರಾಮಮಂದಿರ ವೃತ್ತ ಹೀಗೆ ಪ್ರಮುಖ ಸ್ಥಳಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತಲ್ಲದೇ ಅನೇಕ ಪೊಲೀಸ್ ವಾಹನಗಳಲ್ಲಿ ಅಧಿಕಾರಿಗಳು ನಗರದಲ್ಲಿ ತಿರುಗಿ ಜನರನ್ನು ಜಾಗೃತಿಗೊಳಿಸಿದರು.